ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ತೀವ್ರಗೊಂಡಿದೆ. ಭಾರತದ ಕ್ಷಿಪಣಿಗಳ ದಾಳಿಗೆ ಪಾಕಿಸ್ತಾನದ ಪ್ರಮುಖ ನಗರಗಳಾದ ಕರಾಚಿ, ರಾಜಧಾನಿ ಇಸ್ಲಾಮಾಬಾದ್, ಲಾಹೋರ್, ರಾವಲ್ಪಿಂಡಿ ಕೂಡ ಹಾನಿಗೆ ಒಳಗಾಗಿದೆ. ಆದರೆ ಕರಾಚಿಯ ಬಂದರಿನಲ್ಲಿ 10ಕ್ಕೂ ಹೆಚ್ಚು ಸ್ಫೋಟ ಮಾಡಲಾಗಿದ್ದರಿಂದ ಅಲ್ಲಿ ಎಲ್ಲವೂ ಗುರುತು ಸಿಗದಂತೆ ನಾಶಗೊಂಡಿವೆ.
ಭಾರತ ಸೇನೆಯು ಮೊದಲು ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿ ಮಾಡಿತ್ತು. ಇದರ ಬೆನ್ನಲ್ಲೇ ಐಎನ್ಎಸ್ ವಿಕ್ರಾಂತ್ ನೇತೃತ್ವದಲ್ಲಿ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಲಾಗಿದ್ದು, ಕರಾಚಿ ಬಂದರಿನಲ್ಲಿ ಎಲ್ಲಿ ನೋಡಿದರು ಬೆಂಕಿಯೇ ಕಾಣುವಂತೆ ಆಗಿದೆ. ಐಎನ್ಎಸ್ ವಿಕ್ರಾಂತ್ ಮಾರಕ ದಾಳಿಗೆ ಪ್ರಸ್ತುತ ಕರಾಚಿ ಬಂದರು ಎಲ್ಲ ಸಂಪೂರ್ಣವಾಗಿ ಧ್ವಂಸವಾಗಿದೆ.
ಪಾಕಿಸ್ತಾನವು ಜಮ್ಮು, ಪಠಾಣ್ಕೋಟ್ ಮತ್ತು ಉಧಂಪುರದಲ್ಲಿರುವ ಭಾರತದ ಮಿಲಿಟರಿ ಕೇಂದ್ರಗಳ ಮೇಲೆ ಡ್ರೋನ್ಗಳು ಹಾಗೂ ಕ್ಷಿಪಣಿಗಳ ದಾಳಿ ಮಾಡುವ ವಿಫಲ ಯತ್ನ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಲಾಹೋರ್, ಕರಾಚಿ, ರಾವಲ್ಪಿಂಡಿ, ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ ಇನ್ನುಳಿದ ನಗರಗಳ ಮೇಲೆ ದಾಳಿ ಮಾಡಿ, ನಾಶ ಮಾಡಿದೆ.
ಇನ್ನು ಪಾಕಿಸ್ತಾನದ ಡ್ರೋನ್ಗಳನ್ನು, ಕ್ಷಿಪಣಿಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿವೆ. ಪಾಕಿಸ್ತಾನದ ಪ್ರತಿ ಪ್ರಯತ್ನಗಳನ್ನು ವಿಫಲಗೊಳಿಸಲಾಗಿದೆ. ಭಾರತವು ತನ್ನ ಸಾರ್ವಭೌಮತ್ವವನ್ನು ರಕ್ಷಿಸಲು ಮತ್ತು ತನ್ನ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಇದನ್ನೂ ಓದಿ : F-16 ಸೇರಿ ಪಾಕಿಸ್ತಾನದ ಮೂರು ಫೈಟರ್ ಜೆಟ್ಗಳನ್ನು ಹೊಡೆದುರುಳಿಸಿದ ಭಾರತ!
