Download Our App

Follow us

Home » ರಾಜಕೀಯ » ಬಿಜೆಪಿ ವಿರುದ್ಧ ಬಂಡಾಯವೆದ್ದಿರೋ ಈಶ್ವರಪ್ಪಗೆ ಭಾರೀ ಮುಖಭಂಗ : ಅಮಿತ್ ಶಾ ಭೇಟಿ ಆಗದೆ ಬರಿಗೈಲಿ‌ ವಾಪಸ್ ಆದ ಈಶ್ವರಪ್ಪ..!

ಬಿಜೆಪಿ ವಿರುದ್ಧ ಬಂಡಾಯವೆದ್ದಿರೋ ಈಶ್ವರಪ್ಪಗೆ ಭಾರೀ ಮುಖಭಂಗ : ಅಮಿತ್ ಶಾ ಭೇಟಿ ಆಗದೆ ಬರಿಗೈಲಿ‌ ವಾಪಸ್ ಆದ ಈಶ್ವರಪ್ಪ..!

ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತಮ್ಮ ಪುತ್ರನಿಗೆ ಅವಕಾಶ ಸಿಗದಿರುವುದಕ್ಕೆ ಅಸಮಾಧಾನಗೊಂಡು ಬಿಜೆಪಿ ವಿರುದ್ಧ ಬಂಡಾಯವೆದ್ದಿರೋ ಈಶ್ವರಪ್ಪಗೆ ಭಾರೀ ಮುಖಭಂಗವಾಗಿದೆ.

ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ತಮ್ಮ ಅಸಮಾಧಾನ ವ್ಯಕ್ತಪಡಿಸುವ ಉದ್ದೇಶದಿಂದ ಈಶ್ವರಪ್ಪ ಬುಧವಾರ ದೆಹಲಿಗೆ ತೆರಳಿದ್ದರು. ಆದರೆ, ಅಮಿತ್ ಶಾ ಭೇಟಿ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಡಿಮ್ಯಾಂಡ್​ ಹೊತ್ತು ದಿಲ್ಲಿಗೆ ಹೋಗಿದ್ದ ಈಶ್ವರಪ್ಪಗೆ ಶೇಪ್​ ಔಟ್​ ಆಗಿದೆ.

ಬಿಜೆಪಿ ಹೈಕಮಾಂಡ್​ಲ್ಲಿ ಒಬ್ಬರಾದ ಅಮಿತ್​ ಶಾ,​ ಈಶ್ವರಪ್ಪಗೆ ದೆಹಲಿಗೆ ಬನ್ನಿ ಅಂತಾ ಬುಲಾವ್​ ಕೊಟ್ಟಿದ್ದರು. ಆದರೆ ಈಶ್ವರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡು ಮಾತನಾಡಿಸಲಿಲ್ಲ. ಅಮಿತ್​ ಶಾ ಭೇಟಿ ಟೈಮ್​ ಕೊಡದೆ ಈಶ್ವರಪ್ಪ ಅವ್ರನ್ನ ಅವಮಾನ ಮಾಡಿದ್ದಾರೆ. ಅಮಿತ್ ಶಾ ಅವರನ್ನು ಭೇಟಿಯಾಗದೆ ಈಶ್ವರಪ್ಪ ಬರಿಗೈಲಿ‌ ವಾಪಸ್ ಆಗಿದ್ದಾರೆ.

ದೆಹಲಿಯಲ್ಲಿ ಆದ ಅವಮಾನಕ್ಕೆ ಕೆ.ಎಸ್​ ಈಶ್ವರಪ್ಪ ಪ್ರತಿಕ್ರಿಯಿಸಿ, ದೆಹಲಿಗೆ ನನ್ನನ್ನು ಕರೆದು ಅಮಿತ್ ಶಾ ಅವ್ರು ಭೇಟಿಯಾಗಿಲ್ಲ. ಕರೆದು ಈ ರೀತಿ ಅವಮಾನ ಮಾಡಿದ್ದಾರೆ ಎಂದು ನಾನು ಭಾವಿಸಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಇದನ್ನೂ ಓದಿ : ಲೋಕಸಭಾ ಅಖಾಡದಲ್ಲಿ ಝಣ ಝಣ ಕಾಂಚಾಣದ ಸದ್ದು – ಮಾ.17 ರಿಂದ ಏ.2 ರವರೆಗೆ ಸೀಜ್​ ಆಗಿದ್ದೇಷ್ಟು ಗೊತ್ತಾ?

Leave a Comment

DG Ad

RELATED LATEST NEWS

Top Headlines

ರಮೇಶ್ ರೆಡ್ಡಿ ನಿರ್ಮಾಣದ “ಘುಸ್ಪೈಥಿಯಾ” ಚಿತ್ರ ಆ.9ರಂದು ತೆರೆಗೆ..!

ನಿರ್ಮಾಪಕ ರಮೇಶ್ ರೆಡ್ಡಿ ಅವರು ಕನ್ನಡ ಚಿತ್ರರಂಗದಲ್ಲಿ ‘ಉಪ್ಪು ಹುಳಿ ಖಾರ’, ‘ನಾತಿಚರಾಮಿ’, ‘ಪಡ್ಡೆಹುಲಿ’, ‘100’, ‘ಗಾಳಿಪಟ 2’ ಚಿತ್ರಗಳನ್ನು ನಿರ್ಮಿಸಿದ್ದಾರೆ. ಪ್ರಸ್ತುತ ಬಹು ನಿರೀಕ್ಷಿತ “45”

Live Cricket

Add Your Heading Text Here