ಬೆಂಗಳೂರು : ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಹಿನ್ನೆಲೆ ಇಡೀ ದೇಶಾದ್ಯಂತ ನೀತೆ ಸಂಹಿತೆ ಜಾರಿಯಾಗಿದ್ದು, ಅಲ್ಲಲ್ಲಿ ಚೆಕ್ಪೋಸ್ಟ್ಗಳನ್ನು ಹಾಕಿರುವ ಪೊಲೀಸರು ಮತ್ತು ಚುನಾವಣಾಧಿಕಾರಿಗಳು, ಚುನಾವಣಾ ಅಕ್ರಮಗಳನ್ನು ತಡೆಯಲು ಹದ್ದಿನ ಕಣ್ಣಿಟ್ಟಿದ್ದಾರೆ.
ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಯಿದ್ದರು, ಲೋಕಸಭಾ ಅಖಾಡದಲ್ಲಿ ಝಣ ಝಣ ಕಾಂಚಾಣದ ಸದ್ದು ಜೋರಾಗಿದೆ. ಈಗಾಗಲೇ ಕಳೆದ 20 ದಿನದಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟಿ ಕೋಟಿ ಹಣ, ಮದ್ಯ, ಚಿನ್ನಾಭರಣ ಸೀಜ್ ಮಾಡಲಾಗಿದೆ. ಇದರೊಂದಿಗೆ ಬೆಂಗಳೂರಿನ ಮೂರು ಕ್ಷೇತ್ರದಲ್ಲಿ ಒಟ್ಟು ಎಂಟೂವರೆ ಕೋಟಿ ಸೀಜ್ ಜಪ್ತಿ ಮಾಡಲಾಗಿದೆ.
ಮಾರ್ಚ್ 17 ರಿಂದ ಏಪ್ರಿಲ್ 2 ರವರೆಗೆ ಸೀಜ್ ಆಗಿದ್ದೇಷ್ಟು ಗೊತ್ತಾ?
- 3 ಕೋಟಿ 85 ಲಕ್ಷದ 46 ಸಾವಿರದ 953 ರೂಪಾಯಿ ನಗದು
- 8 ಕೋಟಿ 18 ಲಕ್ಷದ 45 ಸಾವಿರದ 532 ಲೀಟರ್ ಮದ್ಯ ಸೀಜ್
- 8 ಕೋಟಿ 8 ಲಕ್ಷದ 45 ಸಾವಿರದ 532 ಲೀಟರ್ ಮದ್ಯ ಸೀಜ್
- 53 ಲಕ್ಷದ 62 ಸಾವಿರದ 420 ಲಕ್ಷ ಮೌಲ್ಯದ 77 ಕೆಜಿ ಮಾದಕ ವಸ್ತು ವಶಕ್ಕೆ
- 37 ಲಕ್ಷ 50 ಸಾವಿರ ಮೌಲ್ಯದ ಚಿನ್ನ, ಬೆಳ್ಳಿ ವಶಕ್ಕೆ
ಇದನ್ನೂ ಓದಿ : ವಿಜಯಪುರ : ಕೊಳವೆ ಬಾವಿಗೆ ತಲೆಕೆಳಗಾಗಿ ಬಿದ್ದ ಮಗುವಿನ ರಕ್ಷಣಾ ಕಾರ್ಯಾಚರಣೆ ಚುರುಕು – ಕ್ಯಾಮೆರಾದಲ್ಲಿ ಕಂದಮ್ಮನ ಚಲನವಲನ ಸೆರೆ..!
Post Views: 125