ನವದೆಹಲಿ : ಭಾರತೀಯ ಸೇನೆ ‘ಆಪರೇಷನ್ ಸಿಂಧೂರ’ ಮೂಲಕ ‘ಪಹಲ್ಲಾಮ್ ದಾಳಿ’ಗೆ ಪಾಕ್ ಉಗ್ರರ ಮೇಲೆ ಪ್ರತೀಕಾರವನ್ನು ತೀರಿಸಿಕೊಂಡಿದೆ. ಸದ್ಯ ಭಾರತ ಪಾಕ್ ನಡುವೆ ಯುದ್ಧದ ಭೀತಿ ಉಂಟಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಗುರುವಾರ (ಮೇ 8) ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಪಹಲ್ಲಾಮ್ ದಾಳಿ ಬಳಿಕ ಭಾರತದಲ್ಲಿ ಪಾಕಿಸ್ತಾನಿ ಕಲಾವಿದರು, ಸೆಲೆಬ್ರಿಟಿ ಹಾಗೂ ಪ್ರಮುಖರ ಸೋಶಿಯಲ್ ಮೀಡಿಯಾ ಖಾತೆ, ಯೂಟ್ಯೂಬ್ ವಾಹಿನಿಗಳ ಚಾನೆಲ್ಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಇದೀಗ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಭಾರತದ ಎಲ್ಲಾ ಒಟಿಟಿ ಪ್ಲಾಟ್ಫಾರ್ಮ್ಗಳು, ಸ್ಟ್ರೀಮಿಂಗ್ ಸೇವೆಗಳು ಮತ್ತು ಡಿಜಿಟಲ್ ಮಧ್ಯವರ್ತಿಗಳಿಗೆ ಪಾಕ್ ಮೂಲದ ಎಲ್ಲಾ ಕಂಟೆಂಟ್ಗಳನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ನಿರ್ದೇಶನ ನೀಡಿದೆ.
ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನಕ್ಕೆ ಸಂಬಂಧಿಸಿದ ಎಲ್ಲಾ ಒಟಿಟಿ ಪ್ಲಾಟ್ಫಾರ್ಮ್, ಮೀಡಿಯಾ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿನ ವೆಬ್ ಸರಣಿಗಳು, ಚಲನಚಿತ್ರಗಳು, ಹಾಡುಗಳು, ಪಾಡ್ಕಾಸ್ಟ್ ಗಳು ಮತ್ತು ಇತರೆ ಕಂಟೆಂಟ್ಗಳನ್ನು ಈ ಕ್ಷಣದಿಂದ ತೆಗೆದು ಹಾಕಬೇಕು ಎಂದು ಸೂಚಿಸಿದೆ. ಜನಪ್ರಿಯ ಡ್ರಾಮಾ,ವೆಬ್ ಸರಣಿ, ಮ್ಯೂಸಿಕ್ ಆಲ್ಬಮ್ಗಳು ಮತ್ತು ಸ್ವತಂತ್ರ ಪಾಡ್ಕಾಸ್ಟ್ನಂತಹ ಪಾಕಿಸ್ತಾನಿ ಮೂಲದ ಕಂಟೆಂಟ್ಗಳನ್ನು ತೆಗೆದುಹಾಕಬೇಕೆಂದು ಹೇಳಿದೆ.
2016ರ ‘ಉರಿ ದಾಳಿ’ಯ ನಂತರ ಪಾಕಿಸ್ತಾನಿ ಕಲಾವಿದರನ್ನು ಭಾರತೀಯ ಚಲನಚಿತ್ರೋದ್ಯಮದಲ್ಲಿ ಬ್ಯಾನ್ ಮಾಡಲಾಗಿತ್ತು. ಸದ್ಯ ಇದುವರೆಗೆ ಒಟಿಟಿ ಪ್ಲಾಟ್ಫಾರ್ಮ್ಗಳು ಸಚಿವಾಲಯದ ಆದೇಶಕ್ಕೆ ಪ್ರತಿಕ್ರಿಯೆಯಾಗಿ ಪಾಕ್ ಅಧಿಕೃತ ಹೇಳಿಕೆಗಳನ್ನು ಬಿಡುಗಡೆ ಮಾಡಿಲ್ಲ.
ಇದನ್ನೂ ಓದಿ : ಜೈಲಿನಲ್ಲಿರುವ ಜನಾರ್ದನ ರೆಡ್ಡಿಗೆ ಮತ್ತೊಂದು ಶಾಕ್.. ಶಾಸಕ ಸ್ಥಾನದಿಂದ ಅನರ್ಹ – ಎಷ್ಟು ವರ್ಷ?
