ನಿಂತಿದ್ದ ಕಬ್ಬಿನ ಟ್ರ್ಯಾಕ್ಟರ್​ಗೆ ಕಾರು​ ಡಿಕ್ಕಿ – ನಾಲ್ವರು ಸ್ಥಳದಲ್ಲೇ ಸಾವು!

ಬಾಗಲಕೋಟೆ : ನಿಂತಿದ್ದ ಕಬ್ಬಿನ ಟ್ರ್ಯಾಕ್ಟರ್​ಗೆ ಕಾರ್​ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆ ಸಿದ್ದಾಪುರ ಬಳಿ ನಡೆದಿದೆ. 17 ವರ್ಷದ ವಿಶ್ವನಾಥ್​​, 22 ವರ್ಷದ ಪ್ರವೀಣ್​, 20 ವರ್ಷದ ಗಣೇಶ್​​, 17 ವರ್ಷದ ಪ್ರಜ್ವಲ್​​ ಮೃತದುರ್ದೈವಿಗಳು.

ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದು, ಮೃತಪಟ್ಟವರು ಸಿದ್ದಾಪುರ ಗ್ರಾಮದ ನಿವಾಸಿಗಳು. ಕಾರಿನಲ್ಲಿದ್ದ ಮೃತದೇಹವನ್ನು ಪೊಲೀಸರು ಜೆಸಿಬಿಯಿಂದ ಹೊರ ತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಹೆಸ್ಕಾಂನಲ್ಲಿ 90 ಕೋಟಿ ಟ್ರಾನ್ಸ್‌ಫಾರ್ಮರ್ ಹಗರಣ ಬಯಲು – ಇಂಧನ ಇಲಾಖೆಯಿಂದಲೇ ಭ್ರಷ್ಟ ಅಧಿಕಾರಿಗಳ ಬೇಟೆ.. ಸಿಐಡಿ ತನಿಖೆಗೆ ಆದೇಶ!

Btv Kannada
Author: Btv Kannada

Read More