ಪಾಕ್​ಗೆ ಗುಮ್ಮಿದ ಟೀಮ್ ಇಂಡಿಯಾ.. ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು, ಭಾರತೀಯ ಸೇನೆಗೆ ಅರ್ಪಿಸಿದ ಕ್ಯಾಪ್ಟನ್​ ಸೂರ್ಯ!

ದುಬೈ : 2025ರ ಏಷ್ಯಾ ಕಪ್ ​​ಟೂರ್ನಿಯಲ್ಲಿ ಬದ್ಧವೈರಿ ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾ ಭರ್ಜರಿಯಾಗಿ 7 ವಿಕೆಟ್​​ಗಳಿಂದ ಗೆದ್ದು ಬೀಗಿದೆ. 128 ರನ್​ಗಳ ಟಾರ್ಗೆಟ್​ ಅನ್ನು ಸೂರ್ಯಕುಮಾರ್ ಪಡೆ ಸುಲಭವಾಗಿಯೇ ತಲುಪಿ ಜಯ ಪಡೆದುಕೊಂಡಿದೆ.

ಇನ್ನೂ ಪಂದ್ಯ ಗೆದ್ದ ಬಳಿಕ ಮಾತನಾಡಿದ ಭಾರತ ತಂಡದ ಕ್ಯಾಪ್ಟನ್​ ಸೂರ್ಯಕುಮಾರ್, ಇದೊಂದು ಪರಿಪೂರ್ಣ ಸಂದರ್ಭ ಎಂದು ನಾನು ಭಾವಿಸುತ್ತೇನೆ. ಪಹಲ್ಗಾಮ್ ಸಂತ್ರಸ್ತರ ಕುಟುಂಬಗಳೊಂದಿಗೆ ನಾವು‌ ನಿಲ್ಲುತ್ತೇವೆ, ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುತ್ತೇವೆ. ಈ ಗೆಲುವನ್ನು ನಮ್ಮ ಎಲ್ಲಾ ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಲು ಬಯಸುತ್ತೇವೆ. ಅವರು ನಮಗೆಲ್ಲರಿಗೂ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತಾರೆ ಎಂದು ಆಶಿಸುತ್ತೇವೆ ಎಂದು ತಿಳಿಸಿದ್ದಾರೆ.

ಹ್ಯಾಂಡ್​ ಶೇಕ್​ ಮಾಡದ​ ಆಟಗಾರರು : ಪಂದ್ಯ ಆರಂಭದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಪರಸ್ಪರ ಹ್ಯಾಂಡ್​ ಶೇಕ್ ಮಾಡಲಿಲ್ಲ. ಇಬ್ಬರ ನಡುವೆ ಕಣ್ಣು ಸಂಪರ್ಕವೂ ಆಗಲಿಲ್ಲ. ಪಂದ್ಯ ಮುಗಿದ ನಂತರವೂ ಆಟಗಾರರ ನಡುವೆ ಯಾವುದೇ ರೀತಿಯ ಹ್ಯಾಂಡ್​ ಶೇಕ್​ ಸಂಪ್ರದಾಯ ನಡೆಯಲಿಲ್ಲ. ಇದು ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ಪ್ರತಿಬಿಂಬಿಸಿದೆ.

ಇದನ್ನೂ ಓದಿ : ಬೆಂಗಳೂರಿಗರೇ ಗಮನಿಸಿ​.. ಇಂದಿನಿಂದ 3 ದಿನ ಕಾವೇರಿ ನೀರು ಬರಲ್ಲ – ಜಲಮಂಡಳಿ ಮಾಹಿತಿ!

Btv Kannada
Author: Btv Kannada

Read More