ಶವ ಸಾಗಿಸುತ್ತಿದ್ದ ವೇಳೆ ಹೊತ್ತಿ ಉರಿದ ಖಾಸಗಿ ಆಂಬ್ಯುಲೆನ್ಸ್ – ನಾಲ್ವರು ಗ್ರೇಟ್‌ ಎಸ್ಕೇಪ್‌!

ರಾಯಚೂರು : ನಗರದಿಂದ ತಾಲೂಕಿನ ಆಶಾಪುರ ಗ್ರಾಮಕ್ಕೆ ಶವ ಸಾಗಿಸುತ್ತಿದ್ದ ಆಂಬ್ಯುಲೆನ್ಸ್​​ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನಡುರಸ್ತೆಯಲ್ಲೇ ಹೊತ್ತಿ ಉರಿದಿದೆ.

ನಗರದ ಖಾಸಗಿ ಆಸ್ಪತ್ರೆಯಿಂದ ಮೃತದೇಹವನ್ನು ಕುಟುಂಬ ಸದಸ್ಯರು ಆಶಾಪುರ ಗ್ರಾಮಕ್ಕೆ ಸಾಗಿಸುತ್ತಿದ್ದಾಗ ಆಂಬುಲೆನ್ಸ್‌ನ ಇಂಜಿನ್ ಬಿಸಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಚಾಲಕನಿಗೆ ಕನ್ನಡಿಯಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಕೂಡಲೇ ಅಲರ್ಟ್​ ಆಗಿ ವಾಹನ ನಿಲ್ಲಿಸಿದ್ದಾನೆ.

ಬಳಿಕ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದಾನೆ. ಆಂಬ್ಯುಲೆನ್ಸ್​​ನಲ್ಲಿ ಮೃತದೇಹದ ಜೊತೆಗೆ ಮೂರು ಜನ ಕುಟುಂಬ ಸದಸ್ಯರು ಕೂತಿದ್ದರು. ಚಾಲಕ ಸೇರಿ ನಾಲ್ಕು ಜನರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Btv Kannada
Author: Btv Kannada

Leave a Comment

Read More