ಬೀದರ್ SP ವಿರುದ್ಧ ಕಿರುಕುಳ ಆರೋಪ – ಫೇಸ್‌ಬುಕ್ ಲೈವ್‌ನಲ್ಲೇ ಯೂಟ್ಯೂಬರ್ ಆತ್ಮಹತ್ಯೆಗೆ ಯತ್ನ!

ಬೀದರ್ : ಬೀದರ್ SP ಪ್ರದೀಪ್ ಗುಂಟಿ ವಿರುದ್ಧ ಯೂಟ್ಯೂಬರ್​ಗೆ ಕಿರುಕುಳ ನೀಡಿರುವ ಗಂಭೀರ ಆರೋಪ ಕೇಳಿಬಂದಿದೆ. ಯೂಟ್ಯೂಬರ್ ಸಲ್ಮಾನ್ ಖಾನ್ ಎಂಬಾತ SP ಪ್ರದೀಪ್ ಗುಂಟಿ ಹಾಗೂ ಸಿಬ್ಬಂದಿ ನೀಡಿದ ಕಿರುಕುಳಕ್ಕೆ ಬೇಸತ್ತು ಫೇಸ್‌ಬುಕ್ ಲೈವ್‌ನಲ್ಲೇ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಬೀದರ್ SP ಪ್ರದೀಪ್ ಗುಂಟಿ ಕಿರುಕುಳ ನೀಡಿದ್ದಾರೆ ಎಂದು ಕಣ್ಣೀರು ಹಾಕಿ ಯೂಟ್ಯೂಬರ್ ಸಲ್ಮಾನ್ ಖಾನ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಫೇಸ್​ಬುಕ್ ಲೈವ್‌ನಲ್ಲಿ ಯೂಟ್ಯೂಬರ್ ಹಲವು ವಿಷಯಗಳನ್ನ ಪ್ರಸ್ತಾಪಿಸಿ ಎಸ್‌ಪಿ ವಿರುದ್ದ ಗಂಭೀರ ಆರೋಪ ಮಾಡಿದ್ದಾನೆ.

SP ಪ್ರದೀಪ್ ಗುಂಟಿ ಶಾಂತಿ ಸಭೆ ಇದೆ ಎಂದು ಕಛೇರಿಗೆ ಕರೆಸಿ ಎಲ್ಲರೆದುರು ಹಲ್ಲೆಗೆ ಯತ್ನಿಸಿದ್ದಾರೆ, ಯುಟ್ಯೂಬ್ ಚಾನೆಲ್ ಮುಂದುವರೆಸದಂತೆ ತಾಕೀತು ಮಾಡಿದ್ದಾರೆ ಎಂದು ಯೂಟ್ಯೂಬರ್ ಸಲ್ಮಾನ್ ಖಾನ್ ಆರೋಪಿಸಿದ್ದಾನೆ. ಇನ್ನು, ನನ್ನ ಈ ವಿಡಿಯೋ ಪಿಎಂ ಮೋದಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ತಲುಪಲಿ. SP ನನ್ನನ್ನು ಮರ್ಡರ್ ಮಾಡ್ತಿನಿ ಅಂತ ಧಮ್ಕಿ ಹಾಕಿದ್ದಾರೆ. ಪೊಲೀಸ್ ಇಲಾಖೆ ಟಾರ್ಚರ್‌ನಿಂದಲೇ ಆತ್ಮಹತ್ಯೆ ಮಾಡಿಕೊಳ್ತಿದ್ದೇನೆ ಎಂದು ಫೇಸ್​ಬುಕ್ ಲೈವ್‌ನಲ್ಲಿ ಯೂಟ್ಯೂಬರ್ ಹೇಳಿದ್ದಾನೆ.

SP ಪ್ರದೀಪ್ ಗುಂಟಿ ಸಮಾಜದಲ್ಲಿ ಶಾಂತಿ ಕೆಡುವ ವಿಡಿಯೋ ಅಪ್ಲೋಡ್ ಮಾಡದಂತೆ ಎಚ್ಚರಿಕೆ ನೀಡಿದ್ರಂತೆ. ಈ ಬಗ್ಗೆ ಅನೇಕ ಬಾರಿ ಸಲ್ಮಾನ್‌ಗೆ ಎಚ್ಚರಿಸಿದ್ದು, ಕೆಲ ದಿನಗಳ‌ ಹಿಂದೆ ತಮ್ಮ ಕಚೇರಿಗೆ ಕರೆಯಿಸಿ ವಾರ್ನ್ ಮಾಡಿದ್ದರಿಂದ ಮನನೊಂದ ಯುಟ್ಯೂಬರ್ ಫೇಸ್‌ಬುಕ್ ಲೈವ್‌ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಯೂಟ್ಯೂಬರ್ ಸಲ್ಮಾನ್ ಖಾನ್ ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ : ಸೆಟ್ಟೇರಿತು ಪ್ರಮೋದ್ ಶೆಟ್ಟಿ ನಟನೆಯ “NH 66” ಸಿನಿಮಾ!

Btv Kannada
Author: Btv Kannada

Leave a Comment

Read More