Download Our App

Follow us

Home » ಸಿನಿಮಾ » ಯುವ ಡಿವೋರ್ಸ್​ಗೆ ಸಪ್ತಮಿ ಗೌಡ ಕಾರಣ.. ನೋಟಿಸ್​ನಲ್ಲಿ ಹೆಸರು ಉಲ್ಲೇಖಿಸಿದ ಶ್ರೀದೇವಿ..!

ಯುವ ಡಿವೋರ್ಸ್​ಗೆ ಸಪ್ತಮಿ ಗೌಡ ಕಾರಣ.. ನೋಟಿಸ್​ನಲ್ಲಿ ಹೆಸರು ಉಲ್ಲೇಖಿಸಿದ ಶ್ರೀದೇವಿ..!

ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ವಿಚ್ಛೇದನದ ಸುದ್ದಿ ಚಂದನವನದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದೀಗ ಈ ಸುದ್ದಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಈ ವಿಚ್ಛೇದನದ ಹಿಂದೆ ಖ್ಯಾತ ನಟಿ ಸಪ್ತಮಿ ಗೌಡ ಕೈವಾಡ ಇದೆ ಎಂಬುದು ಬಹಿರಂಗವಾಗಿದೆ.

ಸಪ್ತಮಿ ಗೌಡ ಯುವ ರಾಜ್​ಕುಮಾರ್​ ಆಪ್ತತೆ ಹೆಚ್ಚಿಸಿಕೊಂಡಿದ್ದೇ ಈ ವಿಚ್ಛೇದನಕ್ಕೆ ಕಾರಣ. ಇದೀಗ ಶ್ರೀದೇವಿ ಕಳುಹಿಸಿರುವ ಲೀಗಲ್ ನೋಟಿಸ್’ನ ಪ್ರತಿಕ್ರಿಯೆ ಪ್ರತಿಯಲ್ಲಿ ಸಪ್ತಮಿ ಗೌಡ ಹೆಸರನ್ನು ಉಲ್ಲೇಖಿಸಿದ್ದು, ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ನೋಟಿಸ್’ನಲ್ಲಿ ಉಲ್ಲೇಖಿಸಿರುವಂತೆ, “2023ರ ಡಿಸೆಂಬರ್​​​ನಲ್ಲಿ ಇಬ್ಬರಿಗೂ ಸಂಬಂಧ ಇದೆ ಅಂತಾ ಗೊತ್ತಾಯ್ತು. 1 ವರ್ಷದಿಂದ ಸಪ್ತಮಿ, ಯುವರಾಜ್ ನಡುವೆ​ ಸಂಬಂಧ ಇರೋದು ತಿಳೀತು. ಸ್ನೇಹಿತರು ಹಾಗೂ ಸಂಬಂಧಿಕರಿಂದ ಅವರಿಬ್ಬರ ಸಂಬಂಧ ಗೊತ್ತಾಗಿತ್ತು. ಶ್ರೀದೇವಿ ಇದ್ದಾಗಲೇ ಸಪ್ತಮಿ ಗೌಡರನ್ನು ಯುವ ಮನೆಗೆ ಕರೆತಂದಿದ್ದರು. ಗರ್ಲ್​​ಫ್ರೆಂಡ್ ಸಪ್ತಮಿಗೌಡಗಾಗಿ ಏನ್ ಬೇಕಾದ್ರೂ ಮಾಡೋಕೆ ಯುವ ರೆಡಿ ಕೂಡ ಇದ್ದರು.

ಶ್ರೀದೇವಿ ಮನೆಯಲ್ಲಿ ಆಕೆ ಮುಂದೆ ಕ್ರೂರವಾಗಿ ಯುವ ನಡೆದುಕೊಂಡಿದ್ದರು. ಈ ವಿಷ್ಯ ತಿಳಿದು ಶ್ರೀದೇವಿ ದೊಡ್ಡ ಆಘಾತಕ್ಕೊಳಗಾಗಿದ್ದರು. ಮನೆಯಿಂದ ಶ್ರೀದೇವಿಯನ್ನ ಓಡಿಸೋಕೆ ಯುವ ಟ್ರೈ ಕೂಡ ಮಾಡಿದ್ದರು ಎನ್ನಲಾಗಿದೆ. ಹೈಯರ್ ಸ್ಟಡೀಸ್​ನಲ್ಲಿದ್ದಾಗ ಮಾನಸಿಕ, ದೈಹಿಕ, ಆರ್ಥಿಕವಾಗಿ ಶ್ರೀದೇವಿ ಕುಗ್ಗಿದ್ದರು. ಯುವ ಮಾಡಿರೋ ಆರೋಪಕ್ಕಿಂತ ರಿಯಾಲಿಟಿನೇ ಬೇರೆ ಇದೆ ಎಂದು ನೋಟಿಸ್​​ಗೆ ಕೊಟ್ಟಿರೋ ರಿಪ್ಲೈನಲ್ಲಿ ಶ್ರೀದೇವಿ ಗಂಭೀರ ಆರೋಪ ಮಾಡಿದ್ದಾರೆ” ವಕೀಲರ ಮೂಲಕ ಈ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.

ಇನ್ನು ಯುವ ಮತ್ತು ಶ್ರೀದೇವಿ ಡಿವೋರ್ಸ್ ಪಡೆಯುತ್ತಿರುವುದು ದೊಡ್ಮೆನಯಲ್ಲಿ ಯಾರಿಗೂ ಇಷ್ಟವಿಲ್ಲ ಎಂದು ಹೇಳಲಾಗುತ್ತಿದೆ. ರಾಜ್ ಕುಟುಂಬದಲ್ಲಿ ವಿಚ್ಛೇದನವೆಂಬ ಬಿರುಗಾಳಿ ಎದ್ದಿದ್ದು ಇದೇ ಮೊದಲ ಬಾರಿ. ಈ ನೋಟಿಸ್’ಗೆ ಯುವ ಆಗಲಿ, ದೊಡ್ಮನೆ ಕುಟುಂಬದವರಾಗಲಿ ಯಾವ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : ಬೆಂಗಳೂರು : ಆತ್ಮಹ*ತ್ಯೆ ಮಾಡಿಕೊಳ್ಳಲು ಮೆಟ್ರೋ ಟ್ರ್ಯಾಕ್​ಗೆ ಹಾರಿದ ಯುವಕ..!

 

 

 

 

 

 

 

Leave a Comment

DG Ad

RELATED LATEST NEWS

Top Headlines

ವಾಲ್ಮೀಕಿ ಹಗರಣ – ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ 10 ಕೆ.ಜಿ‌ ಚಿನ್ನದ ಬಿಸ್ಕೆಟ್ SIT ವಶಕ್ಕೆ..!

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಸಂಬಂಧ ತನಿಖೆಯನ್ನ SIT ಚುರುಕುಗೊಳಿಸಿದೆ. ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ ಬರೋಬ್ಬರಿ 10 ಕೆ.ಜಿ‌ ಚಿನ್ನದ

Live Cricket

Add Your Heading Text Here