ಹಾಸನ : ದಳಪತಿಗಳ ಕೋಟೆಯಲ್ಲಿ ಇಂದು ಸಿದ್ದು, ಡಿಕೆಶಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ದೇವೇಗೌಡರ ಮೊಮ್ಮಗನ ಸೋಲಿಸಲು ಸಿಎಂ, ಡಿಸಿಎಂ ಪ್ಲಾನ್ ರೂಪಿಸಿದ್ದು, ಇಂದು ಹಾಸನದಲ್ಲಿ ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಪ್ರಜಾಧ್ವನಿ ಯಾತ್ರೆ ನಡೆಸಲಿದ್ದಾರೆ.
ಸಿಎಂ ಸಿದ್ದು ಹಾಸನದ ಬೇಲೂರಿಗೆ ಬೆಳಗ್ಗೆ 10.30ರ ನಂತರ ಭೇಟಿ ನೀಡಲಿದ್ದಾರೆ. ಹಾಸನ ಜಿಲ್ಲೆಯ 5 ತಾಲ್ಲೂಕಿನಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಬೇಲೂರು, ಸಕಲೇಶಪುರ, ಅರಕಲಗೂಡು, ಹೊಳೆನರಸೀಪುರ, ಚನ್ನರಾಯಪಟ್ಟಣದಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.
ಮತ್ತೊಂದೆಡೆ ದಳಪತಿಗಳ ಕೋಟೆಯಲ್ಲಿ ಟ್ರಬಲ್ ಶೂಟರ್ ಡಿಕೆಶಿ ತಂತ್ರ ರೂಪಿಸಲಿದ್ದು, ಇಂದು ಹಾಸನ, ನಾಳೆ ಮಂಡ್ಯದಲ್ಲಿ ಡಿ.ಕೆ.ಶಿವಕುಮಾರ್ ಬೃಹತ್ ಪ್ರಚಾರ ನಡೆಸಲಿದ್ದಾರೆ. ಇಂದು ಬೆಳಿಗ್ಗೆಯಿಂದ ರಾತ್ರಿವರೆಗೂ ಹಾಸನದಲ್ಲಿ ಡಿಕೆಶಿ ರ್ಯಾಲಿ ಮಾಡಲಿದ್ದಾರೆ.
ಒಕ್ಕಲಿಗ ಪ್ರಭಾವದ ಮಂಡ್ಯ, ಹಾಸನದಲ್ಲಿ ದಳಪತಿಗಳಿಗೆ ಡಿಕೆಶಿ ಸೆಡ್ಡು ಹೊಡೆಯಲಿದ್ದು, ಮಂಡ್ಯ, ಹಾಸನ ಗೆದ್ದೋರಿಗೆ ಒಕ್ಕಲಿಗ ನಾಯಕತ್ವದ ಕ್ರೆಡಿಟ್ ಸಿಗಲಿದೆ. ಇದೇ ಕಾರಣಕ್ಕಾಗಿ ಎರಡೂ ಕ್ಷೇತ್ರ ಪ್ರತಿಷ್ಠೆಯಾಗಿ ಡಿಕೆ ಶಿವಕುಮಾರ್ ಸ್ವೀಕರಿಸಿದ್ದಾರೆ.
ಇದನ್ನೂ ಓದಿ : ಪ್ರಜಾಪ್ರಭುತ್ವದ ಎಲೆಕ್ಷನ್ ಹಬ್ಬ ಇಂದಿನಿಂದ ಶುರು – 21 ರಾಜ್ಯಗಳ 102 ಸ್ಥಾನಗಳಿಗೆ ಇಂದು ಮತದಾನ..!