Download Our App

Follow us

Home » ರಾಜಕೀಯ » ದೇವೇಗೌಡರ ಮೊಮ್ಮಗನ ಸೋಲಿಸಲು ಮಾಸ್ಟರ್ ಪ್ಲಾನ್ – ಇಂದು ದಳಪತಿಗಳ ಕೋಟೆಯಲ್ಲಿ ಸಿದ್ದು, ಡಿಕೆಶಿ ಅಬ್ಬರದ ಪ್ರಚಾರ..!

ದೇವೇಗೌಡರ ಮೊಮ್ಮಗನ ಸೋಲಿಸಲು ಮಾಸ್ಟರ್ ಪ್ಲಾನ್ – ಇಂದು ದಳಪತಿಗಳ ಕೋಟೆಯಲ್ಲಿ ಸಿದ್ದು, ಡಿಕೆಶಿ ಅಬ್ಬರದ ಪ್ರಚಾರ..!

ಹಾಸನ : ದಳಪತಿಗಳ ಕೋಟೆಯಲ್ಲಿ ಇಂದು ಸಿದ್ದು, ಡಿಕೆಶಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ದೇವೇಗೌಡರ ಮೊಮ್ಮಗನ ಸೋಲಿಸಲು ಸಿಎಂ, ಡಿಸಿಎಂ ಪ್ಲಾನ್​​ ರೂಪಿಸಿದ್ದು, ಇಂದು ಹಾಸನದಲ್ಲಿ ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಪ್ರಜಾಧ್ವನಿ ಯಾತ್ರೆ ನಡೆಸಲಿದ್ದಾರೆ.

ಸಿಎಂ ಸಿದ್ದು ಹಾಸನದ ಬೇಲೂರಿಗೆ ಬೆಳಗ್ಗೆ 10.30ರ ನಂತರ ಭೇಟಿ ನೀಡಲಿದ್ದಾರೆ. ಹಾಸನ ಜಿಲ್ಲೆಯ 5 ತಾಲ್ಲೂಕಿನಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಬೇಲೂರು, ಸಕಲೇಶಪುರ, ಅರಕಲಗೂಡು, ಹೊಳೆನರಸೀಪುರ, ಚನ್ನರಾಯಪಟ್ಟಣದಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.

ಮತ್ತೊಂದೆಡೆ ದಳಪತಿಗಳ ಕೋಟೆಯಲ್ಲಿ ಟ್ರಬಲ್ ಶೂಟರ್ ಡಿಕೆಶಿ ತಂತ್ರ ರೂಪಿಸಲಿದ್ದು, ಇಂದು ಹಾಸನ, ನಾಳೆ ಮಂಡ್ಯದಲ್ಲಿ ಡಿ.ಕೆ.ಶಿವಕುಮಾರ್​​ ಬೃಹತ್​ ಪ್ರಚಾರ ನಡೆಸಲಿದ್ದಾರೆ. ಇಂದು ಬೆಳಿಗ್ಗೆಯಿಂದ ರಾತ್ರಿವರೆಗೂ ಹಾಸನದಲ್ಲಿ ಡಿಕೆಶಿ ರ್ಯಾಲಿ ಮಾಡಲಿದ್ದಾರೆ.

ಒಕ್ಕಲಿಗ ಪ್ರಭಾವದ ಮಂಡ್ಯ, ಹಾಸನದಲ್ಲಿ ದಳಪತಿಗಳಿಗೆ ಡಿಕೆಶಿ ಸೆಡ್ಡು ಹೊಡೆಯಲಿದ್ದು, ಮಂಡ್ಯ, ಹಾಸನ ಗೆದ್ದೋರಿಗೆ ಒಕ್ಕಲಿಗ ನಾಯಕತ್ವದ ಕ್ರೆಡಿಟ್​ ಸಿಗಲಿದೆ. ಇದೇ ಕಾರಣಕ್ಕಾಗಿ ಎರಡೂ ಕ್ಷೇತ್ರ ಪ್ರತಿಷ್ಠೆಯಾಗಿ ಡಿಕೆ ಶಿವಕುಮಾರ್ ಸ್ವೀಕರಿಸಿದ್ದಾರೆ.

 ಇದನ್ನೂ ಓದಿ : ಪ್ರಜಾಪ್ರಭುತ್ವದ ಎಲೆಕ್ಷನ್ ಹಬ್ಬ ಇಂದಿನಿಂದ ಶುರು – 21 ರಾಜ್ಯಗಳ 102 ಸ್ಥಾನಗಳಿಗೆ ಇಂದು ಮತದಾನ..!

Leave a Comment

DG Ad

RELATED LATEST NEWS

Top Headlines

ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್​ – ಭೋಪಾಲ್​ನಲ್ಲಿ ಆರೋಪಿ ಅಭಿಷೇಕ್​ ಅರೆಸ್ಟ್​..!

ಬೆಂಗಳೂರು : ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಭಿಷೇಕ್​ನನ್ನು ಇದೀಗ ಬೆಂಗಳೂರು ಪೊಲೀಸರು ಭೂಪಾಲ್​ನಲ್ಲಿ ಬಂಧಿಸಿದ್ದಾರೆ. ಜು.23 ರಂದು ಕೋರಮಂಗಲದ

Live Cricket

Add Your Heading Text Here