ಬೆಂಗಳೂರಿನ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ವಿಸ್ಮಯ ನಡೆದಿದೆ. ಮಕರ ಸಂಕ್ರಾತಿಯ ಶುಭದಿನದಂದು ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿದೆ. ಅನೇಕರು ಭಕ್ತರು ಈ ವಿಶೇಷ ಕೌತುಕವನ್ನು ಆಸಕ್ತಿಯಿಂದ ಕಣ್ತುಂಬಿಕೊಂಡಿದ್ದಾರೆ.
ಉತ್ತರಾಯಾಣ ಕಾಲ ಆರಂಭವಾಗ್ತಿದ್ದಂತೆ ಸಂಜೆ 5.20 ರಿಂದ 5.23 ಸಮಯದಲ್ಲಿ ಸೂರ್ಯ ರಶ್ಮಿಯು ಲಿಂಗವನ್ನು ಸ್ಪರ್ಶಿಸಿದೆ. ಈ ಹಿನ್ನೆಲೆಯಲ್ಲಿ ಗವಿ ಗಂಗಾಧರ ದೇಗುಲದಲ್ಲಿ ವಿಶೇಷ ಪೂಜೆ ನಡೆದಿದೆ.
ದಕ್ಷಿಣದ ಕಾಶಿಯಂತಲೇ ಖ್ಯಾತಿ ಪಡೆದಿರೋ ಬೆಂಗಳೂರಿನ ಗವಿ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಇಂದು ವಿಸ್ಮಯವೇ ನಡೆದಿದ್ದು, ಶಿವನ ಪಾದವನ್ನ ಸೂರ್ಯರಶ್ಮಿ ಸ್ಪರ್ಶಿಸುವ ಮೂಲಕ ಪಥ ಬದಲಿಸಿದ್ದಾನೆ.
ಸೂರ್ಯರಶ್ಮಿ ಸ್ಪರ್ಶಿಸುವ ವೇಳೆ ಶಿವಲಿಂಗಕ್ಕೆ ವಿಶೇಷ ಬಗೆ-ಬಗೆಯ ಅಭಿಷೇಕಗಳು ಮಾಡಲಾಗಿದೆ. ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯ ತನ್ನ ಪಥ ಬದಲಾಯಿಸುತ್ತಿದ್ದಂತೆ ಗವಿಗಂಗಾಧರೇಶ್ವರನ ಮೇಲೆ ಸೂರ್ಯನ ಕಿರಣಗಳು ಬಿದ್ದಿದೆ. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಇರುವ ಕಾರಣ, ಎಲ್ಇಡಿ ಸ್ಕ್ರೀನ್ ನ ವ್ಯವಸ್ಥೆ ಮಾಡಲಾಗಿತ್ತು. ಈ ವಿಸ್ಮಯವನ್ನು ದೇವಸ್ಥಾನದ ಹೊರ ಭಾಗದಲ್ಲಿ ನಿಂತು ಶಿವ ಭಕ್ತರು ಕಣ್ತುಂಬಿಸಿಕೊಂಡಿದ್ದಾರೆ.
ಇದನ್ನೂ ಓದಿ : ಮಕರ ಜ್ಯೋತಿ ಪ್ರಜ್ವಲಿಸುವ ದಿನವೇ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ..!