Download Our App

Follow us

Home » ಅಪರಾಧ » ಬೆಂಗಳೂರು : ಆಸ್ತಿ, ಚಿನ್ನಾಭರಣದ ಆಸೆಗೆ ಬಿದ್ದು ಅತ್ತೆಯ ಕೊಲೆಗೆ ಯತ್ನಿಸಿದ ಅಳಿಯ, ಮಗಳು ಅರೆಸ್ಟ್..!

ಬೆಂಗಳೂರು : ಆಸ್ತಿ, ಚಿನ್ನಾಭರಣದ ಆಸೆಗೆ ಬಿದ್ದು ಅತ್ತೆಯ ಕೊಲೆಗೆ ಯತ್ನಿಸಿದ ಅಳಿಯ, ಮಗಳು ಅರೆಸ್ಟ್..!

ಬೆಂಗಳೂರು : ಆಸ್ತಿ, ಚಿನ್ನಾಭರಣಕ್ಕಾಗಿ ಮಗಳು, ಅಳಿಯ ಸೇರಿಕೊಂಡು ಅತ್ತೆಯನ್ನ ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಂಗಳೂರಿನ ಆರ್​ಎಂಸಿ ಯಾರ್ಡ್ ಮಾರ್ಕೆಟ್​ನಲ್ಲಿ ನಡೆದಿದೆ. ಮಗಳು ಸುಮಿತ್ರಾ, ಅಳಿಯ ಮುನಿರಾಜು ಚಾಕುವಿನಿಂದ ಇರಿದು ಅತ್ತೆಯ ಕೊಲೆಗೆ ಯತ್ನಿಸಿದ್ದಾರೆ.

ಅಣ್ಣಮ್ಮ ಎಂಬ ಮಹಿಳೆ ಚಾಕು ಇರಿತಕ್ಕೊಳಗಾಗಿದ್ದು, ಮಗಳು ಸುಮಿತ್ರಾ ಹಾಗೂ ಅಳಿಯ ಮುನಿರಾಜುನನ್ನ ಅತ್ತೆ ತಮ್ಮ ಜೊತೆಯೇ ಮನೆಯಲ್ಲಿ ಸಾಕಿಕೊಂಡಿದ್ದಳು. ಅಳಿಯ ಮುನಿರಾಜು ಆರ್​​ಎಂಸಿ ಯಾರ್ಡ್​ನಲ್ಲಿ ಕೆಲಸ ಮಾಡುತ್ತಿದ್ದ, ಸಂಬಳ ಕೊಡಿಸಿ ಅಂತಾ ಮಗಳು, ಅಳಿಯ ಅಣ್ಣಮ್ಮರನ್ನು ಕರೆದೊಯ್ದಿದ್ದರು. ಈ ವೇಳೆ ಮುನಿರಾಜು ಅಣ್ಣಮ್ಮಗೆ ಚಾಕುವಿನಿಂದ ಇರಿದಿದ್ದಾನೆ. ನಂತರ ಮನೆಯಲ್ಲಿದ್ದ 6 ಲಕ್ಷ ಹಣ, ಚಿನ್ನಾಭರಣ ದೋಚಿದ್ದ ಆರೋಪ ಕೇಳಿಬಂದಿದೆ.

ತಾಯಿ ಸತ್ತಿದ್ದಾಳೆಂದು ನಂಬಿ ಮಗಳು, ಅಳಿಯ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿದ್ದರು. ಆದರೆ ಸ್ಥಳೀಯರು ಅಣ್ಣಮ್ಮನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ವಾಪಸ್​ ಬಂದಾಗ ಅಣ್ಣಮ್ಮ ಬದುಕಿರುವುದು ಬೆಳಕಿಗೆ ಬಂದಿದೆ. ಅಳಿಯ, ಮಗಳು, ಮೊಮ್ಮಕ್ಕಳ ವಿರುದ್ಧ ಅಣ್ಣಮ್ಮ ದೂರು ನೀಡಿದ್ದಾರೆ. ಇದೀಗ RMC ಯಾರ್ಡ್ ಪೊಲೀಸರು ಅಳಿಯ, ಮಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : ಕಾರಜೋಳಗೆ “ಗೋಬ್ಯಾಕ್” ಕಂಟಕ : ಸಿಟ್ಟಿಂಗ್ ಕ್ಷೇತ್ರ ಕಳೆದುಕೊಳ್ಳುತ್ತಾ ಬಿಜೆಪಿ?

Leave a Comment

DG Ad

RELATED LATEST NEWS

Top Headlines

ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್​ – ಭೋಪಾಲ್​ನಲ್ಲಿ ಆರೋಪಿ ಅಭಿಷೇಕ್​ ಅರೆಸ್ಟ್​..!

ಬೆಂಗಳೂರು : ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಭಿಷೇಕ್​ನನ್ನು ಇದೀಗ ಬೆಂಗಳೂರು ಪೊಲೀಸರು ಭೂಪಾಲ್​ನಲ್ಲಿ ಬಂಧಿಸಿದ್ದಾರೆ. ಜು.23 ರಂದು ಕೋರಮಂಗಲದ

Live Cricket

Add Your Heading Text Here