ಚಿತ್ರದುರ್ಗ : ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಗೋವಿಂದ ಕಾರಜೋಳ ಅವರಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಬಿಜೆಪಿ ಹೈಕಮಾಂಡ್ ನೀಡಿದೆ. ಹಾಗಾಗಿ ಚಿತ್ರದುರ್ಗದಲ್ಲಿ ಕಾರಜೋಳ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
ಎಲ್ಲಾ 8 ಅಸೆಂಬ್ಲಿ ಕ್ಷೇತ್ರಗಳಲ್ಲೂ ಗೋಬ್ಯಾಕ್ ಕಾರಜೋಳ ಚಳವಳಿ ನಡೆಸುತ್ತಿದ್ದಾರೆ. ಕಾರಜೋಳ ಪರ ನಾವು ಕೆಲಸ ಮಾಡಲ್ಲ ಎಂದು ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಇದ್ಯಾವುದಕ್ಕೂ ಕ್ಯಾರೇ ಎನ್ನದೇ ಕಾರಜೋಳ ಅವರು ಹಾಯಾಗಿ ಕೂತಿದ್ದಾರೆ. ಚಿತ್ರದುರ್ಗ ಹೊತ್ತಿ ಉರೀತಿದ್ರೆ ಕಾರಜೋಳ ಅವರು ಬೆಂಗಳೂರಿನ ಫೈವ್ ಸ್ಟಾರ್ ಹೋಟೆಲ್ ಸಭೆಯಲ್ಲಿ ಹಾಯಾಗಿ ಕುಳಿತಿದ್ದಾರೆಂದು ಕಾರ್ಯಕರ್ತರು ಕೆಂಡ ಕಾರಿದ್ದಾರೆ.
ಈಗ್ಲೇ ಹೀಗೆ ಮುಂದೆ ಹೇಗೋ..? ಎಂದು ಕಾರಜೋಳ ನಡೆಗೆ ಕಾರ್ಯಕರ್ತರು ಫುಲ್ ಗರಂ ಆಗಿದ್ದಾರೆ. ಇದೀಗ ಗೋವಿಂದ ಕಾರಜೋಳ ವಿರುದ್ಧ ಮತ್ತಷ್ಟು ಆಕ್ರೋಶ ಹೆಚ್ಚಾಗುತ್ತಿದ್ದು, ಕಾರಜೋಳ ಸೋಲಿಸಲೆಂದೇ ಕೆಲಸ ಮಾಡ್ತೀವಿ ಎಂದು ಕಾರ್ಯಕರ್ತರು ಪಣತೊಟ್ಟಿದ್ದಾರೆ. ಹೊರಗಿನವರು ಚಿತ್ರದುರ್ಗಕ್ಕೆ ಬೇಡ, ಕಾರಜೋಳ ಚೇಂಜ್ ಮಾಡಿ. ಲೋಕಲ್ಗೆ ಚಿತ್ರದುರ್ಗ ಟಿಕೆಟ್ ನೀಡಿ ಎಂದು ಕಾರ್ಯಕರ್ತರ ಪಟ್ಟುಹಿಡಿದಿದ್ದಾರೆ.
ಇದೀಗ, ಸಿಟ್ಟಿಂಗ್ ಕ್ಷೇತ್ರ ಚಿತ್ರದುರ್ಗವನ್ನು ಕಳೆದುಕೊಳ್ತಾ ಬಿಜೆಪಿ..? ಕೈನಲ್ಲಿದ್ದ ಕ್ಷೇತ್ರವನ್ನು ಕೈಯಾರೆ ಕಳೆದುಕೊಳ್ತಾ ಬಿಜೆಪಿ..? ಗೋವಿಂದ ಕಾರಜೋಳಗೆ ಟಿಕೆಟ್ ಕೊಟ್ಟು ತಪ್ಪು ಮಾಡ್ತಾ ಬಿಜೆಪಿ..? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಗೋವಿಂದ ಕಾರಜೋಳ ವಿರುದ್ದ ಕಾರ್ಯಕರ್ತರು ಬಂಡಾಯ ಎದ್ದಿದ್ದು, ಕಾರಜೋಳ ಅವರಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಟ್ಟಿದ್ದಕ್ಕೆ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಅಸಮಾಧಾನ ವ್ಯಕ್ತವಾಗಿತ್ತು. ಅಭಿಮಾನಿಗಳು ಗೋ ಬ್ಯಾಕ್ ಕಾರಜೋಳ ಎಂದು ಕಾಮೆಂಟ್ ಮಾಡಿದ್ದರು.
ನಿಷ್ಠಾವಂತರಿಗೆ ಬೆಲೆ ಇಲ್ವಾ? ಕಾರಜೋಳ ಸೋಲು ಖಚಿತ ಎಂದು ಆಕ್ರೋಶ ಹೊರಹಾಕಿದ್ದರು. ಸ್ಥಳೀಯರು ಮಾತ್ರ ಹಿಂದೂಗಳ ಪರ ಹೊರಗಿನ ಅಭ್ಯರ್ಥಿ ಅಲ್ಲ, ಯಾವ ಪುರುಷಾರ್ಥಕ್ಕೆ ಸಮೀಕ್ಷೆ, ಸರ್ವೆಗಳು ಎಂದು ಕಾರ್ಯಕರ್ತರು ಪ್ರಶ್ನೆ ಮಾಡಿದ್ದರು. 2 ಲಕ್ಷ ಮತಗಳ ಅಂತರದಲ್ಲಿ ಬಿಜೆಪಿ ಸೋಲುತ್ತೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣ ಗ್ರೂಪ್ನಲ್ಲಿ ಬಿಜೆಪಿ ಹೈಕಮಾಂಡ್ ಮೇಲೆ ಬೇಸರ ವ್ಯಕ್ತಪಡಿಸಿತ್ತು.
ಇದನ್ನೂ ಓದಿ : ಸಂಸದರಿಗೆ ವಂಚನೆ : ಕರ್ನಾಟಕ ಬ್ಯಾಂಕ್ ವಿರುದ್ಧ ಬೆಂಗಳೂರಿನಲ್ಲಿ FIR..!