Download Our App

Follow us

Home » Uncategorized » ಪ್ರಜ್ವಲ್​​ ರೇವಣ್ಣ ಪೆನ್​​​ಡ್ರೈವ್​ ಕೇಸ್ – ಸಿಎಂ ಸಿದ್ದುಗೆ ಸಾಹಿತಿಗಳು, ಚಿಂತಕರು, ಹೋರಾಟಗಾರರಿಂದ ಪತ್ರ..!

ಪ್ರಜ್ವಲ್​​ ರೇವಣ್ಣ ಪೆನ್​​​ಡ್ರೈವ್​ ಕೇಸ್ – ಸಿಎಂ ಸಿದ್ದುಗೆ ಸಾಹಿತಿಗಳು, ಚಿಂತಕರು, ಹೋರಾಟಗಾರರಿಂದ ಪತ್ರ..!

ಬೆಂಗಳೂರು : ಪ್ರಜ್ವಲ್​​ ರೇವಣ್ಣ ಪೆನ್​​​ಡ್ರೈವ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸಾಹಿತಿಗಳು, ಚಿಂತಕರು, ಹೋರಾಟಗಾರರು ಸೇರಿ 116 ಪ್ರಜ್ಞಾವಂತ ನಾಗರಿಕರು ಪತ್ರ ಬರೆದಿದ್ದಾರೆ.

ಸಿಎಂಗೆ ಬರೆದ ಪತ್ರದಲ್ಲಿ, ಪ್ರಜ್ವಲ್​ ರೇವಣ್ಣ ಎಲ್ಲೇ ಇದ್ದರೂ ಅರೆಸ್ಟ್ ಮಾಡ್ಬೇಕು. ಕಾರ್ತಿಕ್​​ನನ್ನೂ ಅರೆಸ್ಟ್ ಮಾಡಿ ಸೂಕ್ತ ಕ್ರಮ ಜರುಗಿಸಬೇಕು. ಇಂಥಾ ದೌರ್ಜನ್ಯ ನಡೆಸುತ್ತಿರುವ ಕುಟುಂಬಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಸಾಹಿತಿ, ಹೋರಾಟಗಾರರಾದ ಬಿ.ಟಿ.ಲಲಿತಾನಾಯಕ್​, ಲೀಲಾ ಸಂಪಿಗೆ, ಕೆ.ಎಸ್​.ವಿಮಲ, ದು.ಸರಸ್ವತಿ, ಮಾವಳ್ಳಿ ಶಂಕರ್, ಕೆ.ಷರೀಫ​​​​, ಕುಂ.ವೀರಭದ್ರಪ್ಪ, ವರಲಕ್ಷ್ಮಿ ಸೇರಿದಂತೆ 116 ಮಂದಿ ಆಗ್ರಹ ಮಾಡಿದ್ದಾರೆ. ಇದರೊಂದಿಗೆ 16 ಸೂಕ್ತ ಕ್ರಮ ಕೈಗೊಳ್ಳುವಂತೆ ನಾಗರಿಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

16 ಪ್ರಮುಖ ಬೇಡಿಕೆಗಳು :

  • ಪ್ರಜ್ವಲ್ ರೇವಣ್ಣ ಎಲ್ಲಿದ್ರೂ ಪತ್ತೆಮಾಡಿ ಬಂಧಿಸಿ,
  • ಸಂತ್ರಸ್ತೆಯರು ಧೈರ್ಯವಾಗಿ ದೂರು ನೀಡುವ ಸ್ಥಿತಿ ನಿರ್ಮಿಸಿ
  • ಹಗರಣ ಕುರಿತು ರಾಜಕೀಯ ಹೇಳಿಕೆಗಳನ್ನು ನಿರ್ಬಂಧಿಸಿ
  • ಕಾಲಮಿತಿಯೊಳಗೆ SIT ತನಿಖೆ ಮಾಡಿಸಿ, ಬೇಲ್​​ಗೆ ಅವಕಾಶ ಬೇಡ
  • ಲೈಂಗಿಕ ಕೃತ್ಯಗಳ ಚಿತ್ರೀಕರಣಕ್ಕೆ ಸಹಕರಿಸಿದವರ ಅರೆಸ್ಟ್ ಮಾಡಿ
  • ಪ್ರಜ್ವಲ್ ಕಾರು ಚಾಲಕ ಕಾರ್ತಿಕ್‌ನನ್ನು ಕೂಡಲೇ ಬಂಧಿಸಿ
  • ಈ ವಿಡಿಯೋ ತಮ್ಮ ಬಳಿ ಇವೆ ಎಂದವರ ಮೇಲೂ ಕ್ರಮ ಆಗಲಿ
  • ವಿಡಿಯೋ ಹಂಚಿದವರ ವಿರುದ್ಧ ಸಂಚಿನ ಅಪರಾಧದಡಿ ಕೇಸ್ ಹಾಕಿ
  • ಗೊತ್ತಿದ್ದೂ ಸುಮ್ಮನಿದ್ದ ಬಿಜೆಪಿ ನಾಯಕರನ್ನೂ ತನಿಖೆ ವ್ಯಾಪ್ತಿಗೆ ಸೇರಿಸಿ
  • ಪ್ರಜ್ವಲ್​​ ತಂದೆ,ತಾಯಿ ಸೇರಿ ಕುಟುಂಬದವರ ಮೇಲೂ ಕ್ರಮ ಆಗಬೇಕು
  • ವಿಫಲತೆ ತೋರಿದ ಗೃಹ ಇಲಾಖೆ, ಇಂಟಲಿಜೆನ್ಸ್​ ಅಧಿಕಾರಿಗಳ ಮೇಲೆ ಕ್ರಮ ಆಗಲಿ
  • ಜನರ ಮಾಹಿತಿ ಹಕ್ಕನ್ನು ಕಸಿದುಕೊಂಡ ಪ್ರಜ್ವಲ್​ ಮೇಲೆ ಕ್ರಮ ಆಗ್ಬೇಕು
  • ರೇವಣ್ಣ ಫ್ಯಾಮಿಲಿ ಶಿಫಾರಸಿನ ಮೇಲೆ ಹಾಸನದಲ್ಲಿರುವ ಅಧಿಕಾರಿಗಳ ಬದಲಿಸಿ
  • ತನಿಖೆ ಮುಗಿಯುವವರೆಗೆ ರೇವಣ್ಣ ಶಾಸಕ ಸ್ಥಾನ ಸಸ್ಪೆಂಡ್ ಮಾಡಿ
  • ರೇವಣ್ಣ ಫ್ಯಾಮಿಲಿಗೆ ನೀಡಿರುವ ಸರ್ಕಾರಿ ಸೌಲಭ್ಯ ವಾಪಸ್ ಪಡೆಯಿರಿ
  • ಹೆಚ್​ಡಿಡಿ, ಹೆಚ್​ಡಿಕೆ, ಪ್ರಜ್ವಲ್​​ ತಂದಿರುವ ಇಂಜೆಕ್ಷನ್​ ಆರ್ಡರ್​ ರದ್ದು ಮಾಡಿಸಿ

ಇದನ್ನೂ ಓದಿ :‘ಡಬಲ್ ಇಸ್ಮಾರ್ಟ್’ ಚಿತ್ರದ ಟೀಸರ್ ರಿಲೀಸ್ – ಭರ್ಜರಿ ಆಕ್ಷನ್ ಮೂಲಕ ಎಂಟ್ರಿ ಕೊಟ್ಟ ರಾಮ್ ಪೋತಿನೇನಿ..! 

Leave a Comment

DG Ad

RELATED LATEST NEWS

Top Headlines

ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್​ – ಭೋಪಾಲ್​ನಲ್ಲಿ ಆರೋಪಿ ಅಭಿಷೇಕ್​ ಅರೆಸ್ಟ್​..!

ಬೆಂಗಳೂರು : ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಭಿಷೇಕ್​ನನ್ನು ಇದೀಗ ಬೆಂಗಳೂರು ಪೊಲೀಸರು ಭೂಪಾಲ್​ನಲ್ಲಿ ಬಂಧಿಸಿದ್ದಾರೆ. ಜು.23 ರಂದು ಕೋರಮಂಗಲದ

Live Cricket

Add Your Heading Text Here