Download Our App

Follow us

Home » ಜಿಲ್ಲೆ » ನನ್ನ ಮಗನನ್ನು ಕೊಂದವರನ್ನು ಸುಮ್ಮನೆ ಬಿಡ್ಬೇಡಿ – ಮಗನ ಕೊನೆ ಕ್ಷಣದ ಫೋಟೋ ನೋಡಿ ರೇಣುಕಾಸ್ವಾಮಿ ತಂದೆ ಕಣ್ಣೀರು..!

ನನ್ನ ಮಗನನ್ನು ಕೊಂದವರನ್ನು ಸುಮ್ಮನೆ ಬಿಡ್ಬೇಡಿ – ಮಗನ ಕೊನೆ ಕ್ಷಣದ ಫೋಟೋ ನೋಡಿ ರೇಣುಕಾಸ್ವಾಮಿ ತಂದೆ ಕಣ್ಣೀರು..!

ಚಿತ್ರದುರ್ಗ : ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಪೊಲೀಸ್ ಅಧಿಕಾರಿಗಳು ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ಜೊತೆಗೆ ರೇಣುಕಾಸ್ವಾಮಿಗೆ ಹಿಂಸೆ ನೀಡಿರುವ ಫೋಟೋಗಳನ್ನ ಪೊಲೀಸರು ರಿಟ್ರೀವ್ ಮಾಡಿಕೊಂಡಿದ್ದು, ಅವುಗಳಲ್ಲಿ ಕೆಲವು ವೈರಲ್ ಆಗುತ್ತಿವೆ. ಇದೀಗ ಮಗನ ಕೊನೆಯ ಕ್ಷಣದ ಫೋಟೋ ನೋಡಿ ರೇಣುಕಾಸ್ವಾಮಿ ತಂದೆ ಕಾಶಿನಾಥ್​ ಶಿವನಗೌಡರ್ ಬಿಟಿವಿ ಮುಂದೆ ಕಣ್ಣೀರು ಹಾಕಿದ್ದಾರೆ.

ಬಿಟಿವಿ ಮುಂದೆ ಕಣ್ಣೀರು ಹಾಕಿದ ಕಾಶಿನಾಥ್​ ಶಿವನಗೌಡರ್ ಅವರು, ಫೋಟೋ ನೋಡಿ ನನ್ನ ಜೀವವೇ ನಿಂತಂತಾಯ್ತು. ನನ್ನ ಮಗ ಎಷ್ಟು ಕಿರುಚಾಡಿದ್ದಾನೋ.. ಎಷ್ಟು ಒದ್ದಾಡಿದ್ದಾನೋ?
ನನ್ನ ಕಂದ ಎಷ್ಟು ನೋವು ಅನುಭವಿಸಿದ್ದಾನೋ? ದರ್ಶನ್​​ ನಿಜ ಜೀವನದ ರಾಕ್ಷಸ, ನಾಯಕನಲ್ಲ ಖಳನಾಯಕ. ದರ್ಶನ್​​ ಬೆನ್ನಿಗೆ ನಿಂತಿರೋ ಫ್ಯಾನ್ಸ್​ಗಳು ಈಗ್ಲಾದ್ರೂ ಯೋಚಿಸಿ ಎಂದಿದ್ದಾರೆ.

ದೈನೇಸಿ ಬೇಡಿಕೊಂಡರೂ ಬಿಟ್ಟಿಲ್ಲ. ನನ್ನ ಪತ್ನಿ ಗರ್ಭಿಣಿ ಅಂದ್ರೂ ಕರುಣೆ ಬಂದಿಲ್ಲ. ಎಳ್ಳಷ್ಟೂ ಕನಿಕರ ತೋರಿಸದೇ ಬಡಿದಿದ್ದಾರೆ. ನಾವು ಸುಧಾರಿಸಿಕೊಳ್ಳೋ ಹೊತ್ತಲ್ಲೇ ಆಘಾತ ಆಯ್ತು. ಒಬ್ಬರಲ್ಲೂ ಸ್ವಲ್ಪನಾದ್ರೂ ಕರುಣೆ, ಮಾನವೀಯತೆ ಇರಲಿಲ್ವಾ? ಫೋಟೋ ನೋಡಿ ನನಗೆ ದಿಗ್ಬ್ರಮೆ ಆಗ್ತಾ ಇದೆ. ನನ್ನ ಸೊಸೆ ಇದೆಲ್ಲಾ ನೋಡಿ ಹೇಗೆ ತಡೆದುಕೊಂಡಿದ್ದಾಳೋ. ದರ್ಶನ್​​ ದೇವರಾಗೋ ಬದಲು ರಾಕ್ಷಸನಾಗಿಬಿಟ್ರು ಎಂದು ಕಣ್ಣೀರಿಟ್ಟಿದ್ದಾರೆ.

ಅಭಿಮಾನಿಗಳಿಗೆ ಕೈಮುಗಿದು ಕೇಳ್ಕೋತೀನಿ. ಅತ್ತೂ-ಅತ್ತೂ ನಮ್ಮ ಕಣ್ಣಲ್ಲಿ ನೀರು ಬತ್ತಿ ಹೋಗಿದೆ. ಪವಿತ್ರಾ ಹೆಣ್ಣಲ್ಲ.. ಅವಳೊಬ್ಬ ಹೆಣ್ಣು ರಾಕ್ಷಸಿ. ನನ್ನ ಮಗ ಹೇಗೆ ಒದ್ದಾಡಿ ಸತ್ತನೋ ಅಂತಾ ಶಿಕ್ಷೆ ಇವರಿಗೂ ಆಗ್ಲಿ. ದರ್ಶನ್​​, ಪವಿತ್ರಾಗೌಡ ಇಂಥಾ ಕ್ರೌರ್ಯವನ್ನು ಅನುಭವಿಸಬೇಕು ಎಂದು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ : ಪ್ರವೀಣ್ ತೇಜ್-ಅಂಜಲಿ ಅನಿಶ್ ನಟನೆಯ ‘ಜಂಬೂ ಸರ್ಕಸ್’ ಚಿತ್ರದ ಟ್ರೈಲರ್ ರಿಲೀಸ್..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here