ಬೆಂಗಳೂರು : 2023ನೇ ಸಾಲಿನ ಯುಪಿಎಸ್ಸಿ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ 25 ಮಂದಿ ರ್ಯಾಂಕ್ ಪಡೆದಿದ್ದಾರೆ. ವಿಜಯಪುರ ಮೂಲದ ವಿಜೇತ ಇಡೀ ರಾಜ್ಯಕ್ಕೆ ಟಾಪರ್ ಆಗಿದ್ದು, ದಾವಣಗೆರೆಯ ಸೌಭಾಗ್ಯ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
ಆರ್.ರಮ್ಯಾ, ವಿಜೇತಾ ಹೊಸಮನಿ, ಸೌಭಾಗ್ಯ ಬೀಳಗಿ ಮಠ, ಬೆಂಗಳೂರಿನ PSI ಶಾಂತಪ್ಪ ಕುರುಬರ್ ಸೇರಿ 25 ಮಂದಿ ರ್ಯಾಂಕ್ ಪಡೆದಿದ್ದಾರೆ. ಹಾಗಾಗಿ ಕೇಂದ್ರ ಸೇವೆಯ ವಿವಿಧ ಹುದ್ದೆಗಳಿಗೆ ಕನ್ನಡಿಗರು ಅರ್ಹತೆ ಪಡೆದುಕೊಂಡಿದ್ದಾರೆ. ವಿಜೇತಾಗೆ 100 ನೇ ರ್ಯಾಂಕ್, ಧಾರವಾಡದ ಕೃಷಿ ಪದವೀಧರೆ ಸೌಭಾಗ್ಯ ಕೋಚಿಂಗ್ಗೆ ಹೋಗದೇ 101ನೇ ರ್ಯಾಂಕ್ ಪಡೆದಿದ್ದಾರೆ. ಸ್ವಂತ ತರಬೇತಿ ಪಡೆದು ಸ್ವಪ್ರಯತ್ನದಲ್ಲೇ ಸೌಭಾಗ್ಯ UPSC ಪಾಸ್ ಮಾಡಿದ್ದಾರೆ.
ಶಾಂತಪ್ಪ ಕುರುಬರ 8ನೇ ಪ್ರಯತ್ನದಲ್ಲಿ 644ನೇ ರ್ಯಾಂಕ್, ಹುಬ್ಬಳ್ಳಿಯ ಕೃಪಾ ಜೈನ್ 440ನೇ ರ್ಯಾಂಕ್, ದೃಷ್ಟಿದೋಷ ಇರುವ ಕೆ.ಟಿ.ಮೇಘನಾ 721ನೇ ರ್ಯಾಂಕ್, ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿ ಪುತ್ರಿ ಆರ್.ಯಶಸ್ವಿನಿ 379ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ದ್ವಾರಕೀಶ್..!