ಬೆಂಗಳೂರು : ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧಿಸಿ ಪ್ರಮುಖ ಇಬ್ಬರು ಆರೋಪಿಗಳನ್ನು ಕಡೆಗೂ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಾಂಬ್ ಇಟ್ಟು ಪರಾರಿಯಾಗಿದ್ದ ಮುಸಾವಿರ್ ಹುಸೇನ್ ಮತ್ತು ಕೃತ್ಯಕ್ಕೆ ಸಂಚು ಹೂಡಿದ್ದ ಅಬ್ದುಲ್ ಮತೀನ್ ತಾಹಮನನ್ನು ಎನ್ಐಎ ಮಿಡ್ನಾಪುರದ ಲಾಡ್ಜ್ನಲ್ಲಿ ಬಂಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕಳೆದ ರಾತ್ರಿಯಿಂದಲೇ ಎನ್ಐಎ ಟೀಂ ವಿಚಾರಣೆ ನಡೆಸುತ್ತಿದೆ. ಇನ್ನು ಪಶ್ಚಿಮ ಬಂಗಾಳದಿಂದ ಟ್ರಾನ್ಸಿಟ್ ವಾರೆಂಟ್ ಮೇಲೆ ಆರೊಪಿಗಳನ್ನು ಮಿಡ್ನೈಟ್ನಲ್ಲೇ ಕೋಲ್ಕತ್ತಾದಿಂದ ಬೆಂಗಳೂರಿಗೆ ಕರೆತಂದ NIA ಮಡಿವಾಳದ ವಿಚಾರಣೆ ಸೆಲ್ನಲ್ಲಿ ಶಂಕಿತರ ಉಗ್ರರ ವಿಚಾರಣೆ ನಡೆಸಲಿದೆ.
ಇಂದು ಬೆಳಗ್ಗೆ ಕೋರಮಂಗಲದ ಜಡ್ಜ್ ನಿವಾಸದಲ್ಲಿ ಆರೋಪಿಗಳನ್ನು ಹಾಜರು ಪಡಿಸಲು ತಯಾರಿ ನಡೆಸಲಾಗಿದೆ. ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರು ಪಡಿಸಿ NIA ವಶಕ್ಕೆ ನೀಡುವಂತೆ ಹೇಳಲಿದ್ದು, ಬಳಿಕ NIA ಹೆಚ್ಚಿನ ವಿಚಾರಣೆ, ಸ್ಥಳ ಮಹಜರು ಮಾಡಲಿದೆ.
ಬಾಂಬರ್ಸ್ಗಳು ಕೋಲ್ಕತ್ತಾದಲ್ಲಿ ನಕಲಿ ದಾಖಲೆ ನೀಡಿ ಹೆಸರು ಬದಲಾಯಿಸಿ ಕೊಂಡು ವಾಸ್ತವ್ಯ ಹೂಡಿದ್ದರು. ಆರೋಪಿಗಳು ಮಾರ್ಚ್ 13ರಂದು ಶಹನವಾಜ್ ಮತ್ತು ಅನ್ಮೂಲ್ ಹೆಸರಿನಲ್ಲಿ ರೂಂ ಬುಕ್ ಮಾಡಿ ಬಳ್ಳಾರಿಯಿಂದ ಕರ್ನಾಟಕ ಗಡಿ ದಾಟಿ ತೆಲಂಗಾಣ, ಕೇರಳ, ಅಸ್ಸಾಂಗೆ ಸುತ್ತಾಡಿದ್ದರು.
ಆನಂತರ ಪಶ್ಚಿಮ ಬಂಗಾಳದ ಮಿಡ್ನಾಪುರದ ಲಾಡ್ಜ್ಗೆ ಹೋಗಿ ಉಳಿದುಕೊಂಡಿದ್ದರು. ಆದರೆ ಬಾಂಬರ್ ಶಿವಮೊಗ್ಗ ಮೂಲದ ಮುಸಾವಿರ್, ಹೂಡಿ ಸರ್ಕಲ್ನಲ್ಲಿ ಕ್ಯಾಪ್ ಬಿಟ್ಟು ಹೋಗಿದ್ದ. ಕ್ಯಾಪ್ನಲ್ಲಿದ್ದ ಸೀರಿಯಲ್ ನಂಬರ್ ಬೆನ್ನತ್ತಿದ್ದ CCB ಅಧಿಕಾರಿಗಳು ಚೆನ್ನೈನ ಮಾಲ್ಗೆ ತೆರಳಿ 2 ತಿಂಗಳ CCTV ದೃಶ್ಯ ಪರಿಶೀಲಿಸಿದ್ದರು . ಆಗಲೇ ಗೊತ್ತಾಗಿದ್ದು ಬಾಂಬರ್ ಒಬ್ಬನಲ್ಲ ಇಬ್ಬರು ಅನ್ನೋ ಮಾಹಿತಿ. ಇನ್ನು ಮುಸಾವಿರ್ ಕೊಟ್ಟ ಸುಳಿವಿನ ಮೇಲೆ ಬಂಗಾಳಕ್ಕೆ ಹೋಗಿದ್ದ NIA ಟೀಂ CCB ಅಧಿಕಾರದ ಸಹಕಾರದೊಂದಿಗೆ ನಿನ್ನೆ ಬೆಳಗ್ಗೆ ಆರೋಪಿಗಳನ್ನು ಬಂಧಿಸಿದೆ.
ಇದನ್ನೂ ಓದಿ : ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅಬ್ಬರದ ಎದುರು ಮಂಕಾದ ಬಿಜೆಪಿ – ಚೌಟ ಪ್ರಚಾರ ವೈಖರಿಗೆ ಸ್ಥಳೀಯ ಬಿಜೆಪಿಗರೇ ಬೇಸರ..!