ರಾಯಚೂರು : ಕುಡಿದ ಮತ್ತಿನಲ್ಲಿ ಕಿಡಿಗೇಡಿಗಳು ಬೇಕರಿ ಗ್ಲಾಸ್ ಕೌಂಟರ್ ಧ್ವಂಸ ಮಾಡಿದ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದ ಬಸವ ಸಾಗರ ವೃತ್ತದ ವಿ.ಬಿ ಕೇಕ್ ಕಾರ್ನರ್ ಬಳಿ ನಡೆದಿದೆ.
ಕಿಡಿಗೇಡಿಗಳಿಂದ 20 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಕ್ರಿಮಿನಲ್ ಕೇಸ್ ದಾಖಲಿಸಿದ್ರೇ ಜೀವ ತೆಗೆಯುವುದಾಗಿ ಮಾಲೀಕರಿಗೆ ಪುಂಡರು ಬೆದರಿಕೆ ಹಾಕಿದ್ದಾರೆ. ಕಿಡಿಗೇಡಿಗಳ ಗೂಂಡಾ ವರ್ತನೆಗೆ ಪಟ್ಟಣದ ಜನತೆ ಬೆಚ್ಚಿ ಬಿದ್ದಿದ್ದಾರೆ.
ಬೇಕರಿ ಮಾಲೀಕ ಶರತ್ ಹಾಗೂ ಕೆಲಸಗಾರರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಪೊಲೀಸರ ಭಯ ಇಲ್ಲದೆ ನಿರ್ಭಯದಿಂದ ಕಿಡಿಗೇಡಿ ಕೃತ್ಯ ಮಾಡಲಾಗಿದೆ. ರಾತ್ರಿ ಗಸ್ತು ತಿರಗಬೇಕಿದ್ದ ಪೊಲೀಸರಿಂದ ಕರ್ತವ್ಯ ನಿರ್ಲಕ್ಷ್ಯ ತೋರಿದ್ದಾರೆ. ತಕ್ಷಣ ಆರೋಪಿಗಳನ್ನ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬೇಕರಿ ಮಾಲೀಕ ಶರತ್ ಒತ್ತಾಯಿಸಿದ್ದಾರೆ. ಈ ಸಂಬಂಧ ಲಿಂಗಸೂಗುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ದಾವಣಗೆರೆ : ಇಳಿವಯಸ್ಸಿನ ಜೋಡಿಗೆ ಕೂಡಿ ಬಂದ ಕಂಕಣ ಭಾಗ್ಯ..!
Post Views: 241