Download Our App

Follow us

Home » ಅಪರಾಧ » ರಾಯಚೂರು : ಕುಡಿದ ಮತ್ತಿನಲ್ಲಿ ಬೇಕರಿ ಗ್ಲಾಸ್ ಕೌಂಟರ್ ಧ್ವಂಸ ಮಾಡಿದ ಕಿಡಿಗೇಡಿಗಳು..!

ರಾಯಚೂರು : ಕುಡಿದ ಮತ್ತಿನಲ್ಲಿ ಬೇಕರಿ ಗ್ಲಾಸ್ ಕೌಂಟರ್ ಧ್ವಂಸ ಮಾಡಿದ ಕಿಡಿಗೇಡಿಗಳು..!

ರಾಯಚೂರು : ಕುಡಿದ ಮತ್ತಿನಲ್ಲಿ ಕಿಡಿಗೇಡಿಗಳು ಬೇಕರಿ ಗ್ಲಾಸ್ ಕೌಂಟರ್ ಧ್ವಂಸ ಮಾಡಿದ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದ ಬಸವ ಸಾಗರ ವೃತ್ತದ ವಿ.ಬಿ ಕೇಕ್ ಕಾರ್ನರ್ ಬಳಿ ನಡೆದಿದೆ.

ಕಿಡಿಗೇಡಿಗಳಿಂದ 20 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಕ್ರಿಮಿನಲ್ ಕೇಸ್ ದಾಖಲಿಸಿದ್ರೇ ಜೀವ ತೆಗೆಯುವುದಾಗಿ ಮಾಲೀಕರಿಗೆ ಪುಂಡರು ಬೆದರಿಕೆ ಹಾಕಿದ್ದಾರೆ. ಕಿಡಿಗೇಡಿಗಳ ಗೂಂಡಾ ವರ್ತನೆಗೆ ಪಟ್ಟಣದ ಜನತೆ ಬೆಚ್ಚಿ ಬಿದ್ದಿದ್ದಾರೆ.

ಬೇಕರಿ ಮಾಲೀಕ ಶರತ್ ಹಾಗೂ ಕೆಲಸಗಾರರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಪೊಲೀಸರ ಭಯ ಇಲ್ಲದೆ ನಿರ್ಭಯದಿಂದ ಕಿಡಿಗೇಡಿ ಕೃತ್ಯ ಮಾಡಲಾಗಿದೆ. ರಾತ್ರಿ ಗಸ್ತು ತಿರಗಬೇಕಿದ್ದ ಪೊಲೀಸರಿಂದ ಕರ್ತವ್ಯ ನಿರ್ಲಕ್ಷ್ಯ ತೋರಿದ್ದಾರೆ. ತಕ್ಷಣ ಆರೋಪಿಗಳನ್ನ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬೇಕರಿ ಮಾಲೀಕ ಶರತ್ ಒತ್ತಾಯಿಸಿದ್ದಾರೆ. ಈ ಸಂಬಂಧ ಲಿಂಗಸೂಗುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ದಾವಣಗೆರೆ : ಇಳಿವಯಸ್ಸಿನ ಜೋಡಿಗೆ ಕೂಡಿ ಬಂದ ಕಂಕಣ ಭಾಗ್ಯ..!

Leave a Comment

DG Ad

RELATED LATEST NEWS

Top Headlines

ವಾಲ್ಮೀಕಿ ಹಗರಣ – ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ 10 ಕೆ.ಜಿ‌ ಚಿನ್ನದ ಬಿಸ್ಕೆಟ್ SIT ವಶಕ್ಕೆ..!

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಸಂಬಂಧ ತನಿಖೆಯನ್ನ SIT ಚುರುಕುಗೊಳಿಸಿದೆ. ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ ಬರೋಬ್ಬರಿ 10 ಕೆ.ಜಿ‌ ಚಿನ್ನದ

Live Cricket

Add Your Heading Text Here