ದಾವಣಗೆರೆ : ದಾವಣಗೆರೆಯ ಇಳಿವಯಸ್ಸಿನ ಜೋಡಿಗೆ ಮುಪ್ಪಿನ ವಯಸ್ಸಿನಲ್ಲಿ ಕಂಕಣ ಭಾಗ್ಯ ಕೂಡಿ ಬಂದಿದೆ. ಹೊನ್ನಾಳಿ ತಾಲ್ಲೂಕಿನ ಕುಂಬಳೂರು ಗ್ರಾಮದಲ್ಲಿ 56 ವರ್ಷದ ರುಕ್ಮಿಣಿ ಎಂಬುವರನ್ನು 61 ವರ್ಷದ ನಾಗರಾಜ್ ಕೈ ಹಿಡಿದಿದ್ದಾರೆ.
ಶಾಲಾ ಶಿಕ್ಷಕರಾಗಿ ನಿವೃತ್ತಿಯಾದ ನಂತರ ನಾಗರಾಜ್ ಪತ್ನಿಯನ್ನು ಕಳೆದುಕೊಂಡು ಏಕಾಂಗಿ ಜೀವನ ನಡೆಸುತ್ತಿದ್ದರು. ಇತ್ತ ರುಕ್ಮಿಣಿ ತವರು ಮನೆಯಲ್ಲೇ ಇದ್ದರು. ಒಬ್ಬರಿಗೊಬ್ಬರು ಆಸರೆಯಾಗಿರಲಿ ಎಂದು ಕುಟುಂಬಸ್ಥರು, ಆಪ್ತರು ಸೇರಿ ಈ ಜೋಡಿಗೆ ಮದ್ವೆ ಮಾಡಿಸಿದ್ದಾರೆ. ಕುಂಬಳೂರು ಗ್ರಾಮದ ದೇವಸ್ಥಾನದಲ್ಲಿ ಮದ್ವೆ ಮಾಡಿಕೊಂಡ ನಾಗರಾಜ್,ರುಕ್ಮಿಣಿ ನಾವು ಆದರ್ಶವಾಗಿ ಬದುಕುತ್ತೇವೆ ಎನ್ನುವ ವಿಶ್ವಾಸದ ಮಾತನಾಡಿದ್ದಾರೆ.
ಇದನ್ನೂ ಓದಿ : ಪೆನ್ಡ್ರೈವ್ ಕೇಸ್ ಹಿಂದೆ ಯಾರೇ ಇದ್ರೂ ಹೊರ ಬರಲೇಬೇಕಲ್ವಾ..? : ಡಾ.ಜಿ.ಪರಮೇಶ್ವರ್..!
Post Views: 287