ಹಾಸನ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ದಿನೇ ದಿನೇ ಹೊಸ ರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡೀಯೋ ಕೇಸ್ ಅನ್ನು ಎಸ್ಐಟಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರ ಈ ಪ್ರಕರಣವನ್ನು SITಗೆ ನೀಡಿದ ಬೆನ್ನಲ್ಲೇ ತನಿಖೆ ತೀವ್ರಗೊಳಿಸಲು, SIT ಮುಖ್ಯಸ್ಥ ಬಿ.ಕೆ.ಸಿಂಗ್ ಮೂರು ತಂಡ ರಚಿಸಿ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿದ್ದಾರೆ. ಈಗಾಗಲೇ ಸ್ಥಳೀಯ ಪೊಲೀಸರು ಕೇಸ್ ಫೈಲ್ SITಗೆ ರವಾನೆ ಮಾಡಿದ್ದಾರೆ.
ಈ ಕೇಸ್ಗೆ ಸಂಬಂಧಿಸಿದಂತೆ SP ಸುಮನ್ ಡಿ ಪೆನ್ನೇಕರ್ ನೇತೃತ್ವದಲ್ಲಿ ಸಂತ್ರಸ್ಥೆಯರ ಹೇಳಿಕೆ ದಾಖಲು ಮಾಡಲಾಗಿದೆ. ಮತ್ತೊಂದು ತಂಡ ಟೆಕ್ನಿಕಲ್ ಆಗಿ ವಿಡಿಯೋಗಳ ಪರಿಶೀಲನೆ ಮಾಡಿದೆ. ಇದರ ಜೊತೆಗೆ ಹಾಸನ ಎಸ್ಪಿ ಸೀಮಾ ಲಾಟ್ಕರ್ ಸೇರಿ ಇತರೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ, SP ಸೀಮಾ ಲಾಟ್ಕರ್ ಅವರು ಎರಡು ಪೆನ್ಡ್ರೈವ್ಗಳನ್ನು SITಗೆ ರವಾನೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಇಂದಿನಿಂದ SIT ತನಿಖೆ ಮತ್ತಷ್ಟು ಚುರುಕು ಪಡೆದುಕೊಳ್ಳಲಿದೆ.
ವಿಶೇಷ ತನಿಖಾ ತಂಡ ರಚನೆ : SIT ಮುಖ್ಯಸ್ಥ ಬಿ.ಕೆ.ಸಿಂಗ್ ರಚನೆ ಮಾಡಿರುವ ವಿಶೇಷ ತನಿಖೆ ತಂಡದಲ್ಲಿ ವಿವಿಧ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸ್ತಿರುವ ಪರಿಣಿತರ 18 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಇಂದಿನಿಂದಲೇ SIT ಟೀಂ ಕಾರ್ಯಾಚರಣೆಗೆ ಧುಮುಕಿವೆ.
ವಿಶೇಷ ತನಿಖೆ ತಂಡ ಹೀಗಿದೆ :
- ಮಾರತ್ತಹಳ್ಳಿ ACP ಪ್ರಿಯದರ್ಶಿನಿ ಈಶ್ವರ್ ಸಾಣೆಕೊಪ್ಪ
- ಸಿಸಿಬಿ ಎಸಿಪಿ ಸತ್ಯನಾರಾಯಣ ಸಿಂಗ್
- ಮಂಗಳೂರು ದಕ್ಷಿಣ ಎಸಿಪಿ ಧನ್ಯಾ ಎನ್ ನಾಯಕ್
- ಕೆ.ಆರ್.ಪೇಟೆ ಠಾಣೆ ಇನ್ಸ್ಪೆಕ್ಟರ್ ಸುಮರಾಣಿ
- ಮೈಸೂರು ಆಲನಹಳ್ಳಿ ಇನ್ಸ್ಪೆಕ್ಟರ್ ಸ್ವರ್ಣ
- ಮಂಗಳೂರು ಉರವ ಠಾಣೆ ಇನ್ಸ್ಪೆಕ್ಟರ್ ಭಾರತಿ
- ವೈಟ್ಫೀಲ್ಡ್ CEN ಠಾಣೆ ಇನ್ಸ್ಪೆಕ್ಟರ್ ಹೇಮಂತ್ ಕುಮಾರ್
- ಬೆಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಜಿ.ಸಿ.ರಾಜಾ
- ಮಲ್ಪೆ ಪಿಎಸ್ಐ ವೈಲೆಟ್ ಫ್ಲೆಮಿನಾ, ಸಿಸಿಆರ್ಬಿ PSI ವಿನುತಾ
- ಯಳಂದೂರು PSI ನಂದೀಶ್, ಇಲವಾಲ PSI ಕುಮುದಾ
- ಹೆಡ್ ಕಾನ್ಸ್ಟೇಬಲ್ಗಳಾದ ಸುಮತಿ, ಮನೋಹರ್, ಸುನಿಲ್
- ಬಸವರಾಜ್, ರಂಗಸ್ವಾಮಿ, ಸಿಂಧು ಸೇರಿ 18 ಮಂದಿ ನಿಯೋಜನೆ
ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ – SIT ಮುಂದೆ ಸ್ಫೋಟಕ ಮಾಹಿತಿ ಬಿಚ್ಚಿಟ್ರಾ ಸಂತ್ರಸ್ತೆಯರು?