Download Our App

Follow us

Home » ರಾಜಕೀಯ » ಅಭ್ಯರ್ಥಿ ಸೋತ್ರು ಪರವಾಗಿಲ್ಲ ಪಕ್ಷದ ಶಿಸ್ತು ಮೀರಿದ್ರೆ ಕಠಿಣ ಕ್ರಮ ಕೈಗೊಳ್ತೀವಿ : ಮುನಿಯಪ್ಪಗೆ ಡಿಕೆಶಿ ಓಪನ್​​​​ ವಾರ್ನಿಂಗ್​..!

ಅಭ್ಯರ್ಥಿ ಸೋತ್ರು ಪರವಾಗಿಲ್ಲ ಪಕ್ಷದ ಶಿಸ್ತು ಮೀರಿದ್ರೆ ಕಠಿಣ ಕ್ರಮ ಕೈಗೊಳ್ತೀವಿ : ಮುನಿಯಪ್ಪಗೆ ಡಿಕೆಶಿ ಓಪನ್​​​​ ವಾರ್ನಿಂಗ್​..!

ಬೆಂಗಳೂರು : ಮಂತ್ರಿ ಆಗ್ಲಿ, ಶಾಸಕರಾಗ್ಲಿ ಲಕ್ಷ್ಮಣ ರೇಖೆ ದಾಟಿದ್ರೆ ಸುಮ್ನಿರಲ್ಲ. ಅಭ್ಯರ್ಥಿ ಹಾಕಿದ್ದೀವಿ ಗೆಲ್ಲಿಸಿಕೊಂಡು ಬರಬೇಕು, ಅದು ಮಾಡಲ್ಲ ಇದು ಮಾಡಲ್ಲ ಅಂದ್ರೆ ಸಹಿಸಲ್ಲ. ಅಭ್ಯರ್ಥಿ ಸೋತ್ರು ಪರವಾಗಿಲ್ಲ ಶಿಸ್ತು ಮುಖ್ಯ ಎಂದು ಮಂತ್ರಿ ಮುನಿಯಪ್ಪಗೆ ಡಿಕೆಶಿ ಓಪನ್​​​​ ವಾರ್ನಿಂಗ್​ ಕೊಟ್ಟಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಗೆಲ್ಲುವುದು ಅಥವಾ ಸೋಲುವುದು ಬೇರೆ ವಿಚಾರ. ಪಕ್ಷದ ಶಿಸ್ತು ಮೀರಿದ್ರೆ ಕಠಿಣ ಕ್ರಮ ಕೈಗೊಳ್ತೀವಿ ಎಂದು ಮುನಿಯಪ್ಪಗೆ ಎಚ್ಚರಿಕೆ ನೀಡಿದ್ದಾರೆ.

ಹಾಗೆಯೇ, ಕೋಲಾರ ಲೋಕಸಭಾ ಚುನಾವಣಾ ಅಭ್ಯರ್ಥಿಗೆ ಸಂಬಂಧಪಟ್ಟಂತೆ ತಾವು ಹಾಗೂ ಮುಖ್ಯಮಂತ್ರಿಯವರು ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ರಮೇಶ್ ಕುಮಾರ್ ಅವರ ಜೊತೆ ಚರ್ಚೆ ಮಾಡಿದ್ದೇವೆ. ಎರಡೂ ಬಣಗಳಿಗೂ ಟಿಕೆಟ್ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ. ಅವರ ಸ್ವಾರ್ಥಗಳಿಗೆ ಮಣೆ ಹಾಕಿಲ್ಲ. ಪರ್ಯಾಯ ಅಭ್ಯರ್ಥಿ ಗೌತಮ್ ಸಾಮಾನ್ಯ ಕಾರ್ಯಕರ್ತ ಪಕ್ಷದ ನಿಷ್ಠಾವಂತ. ಹೈಕಮಾಂಡ್ ಟಿಕೆಟ್ ಕೊಟ್ಟವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಎಲ್ಲರೂ ಹೇಳಿದ್ದರು. ಹೀಗಾಗಿ ನಾವು ನಿರ್ಧಾರ ತೆಗೆದುಕೊಂಡಿದ್ದೇವೆ. ಇದರಲ್ಲಿ ಯಾವುದೇ ಒಳ ಏಟು ಅಥವಾ ಆಂತರಿಕ ಭಿನ್ನಮತ ಇರುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ : ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಭುಗಿಲೆದ್ದ ಭಿನ್ನಮತ : ಶಾಸಕ ಚಂದ್ರಪ್ಪ ಕಿರಿಯ ಪುತ್ರನ ಮೇಲೆ ಪೊಲೀಸರಿಂದ ಹಲ್ಲೆ?

Leave a Comment

DG Ad

RELATED LATEST NEWS

Top Headlines

ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್​ – ಭೋಪಾಲ್​ನಲ್ಲಿ ಆರೋಪಿ ಅಭಿಷೇಕ್​ ಅರೆಸ್ಟ್​..!

ಬೆಂಗಳೂರು : ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಭಿಷೇಕ್​ನನ್ನು ಇದೀಗ ಬೆಂಗಳೂರು ಪೊಲೀಸರು ಭೂಪಾಲ್​ನಲ್ಲಿ ಬಂಧಿಸಿದ್ದಾರೆ. ಜು.23 ರಂದು ಕೋರಮಂಗಲದ

Live Cricket

Add Your Heading Text Here