ಬೆಂಗಳೂರು : ಜೈಲಲ್ಲಿ ಕುಳಿತು ಆತ್ಮಾಹುತಿ ದಾಳಿಗೆ ಸಂಚು ಪ್ರಕರಣ ಸಂಬಂಧವಾಗಿ 8 ಮಂದಿ ಶಂಕಿತ ಉಗ್ರರ ಮೇಲೆ NIA ಚಾರ್ಜ್ ಶೀಟ್ ನೀಡಿದೆ. NIA ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲೇ ಕುಳಿತು ದಾಳಿಗೆ ಸ್ಕೆಚ್ ಹಾಕಿದ್ದಾರೆ.
ಬೆಂಗಳೂರು ಸೇರಿ ವಿವಿಧೆಡೆ ವಿದ್ವಂಸಕ ಕೃತ್ಯ ನಡೆಸಲು ಸಂಚು ಮಾಡಿದ್ದಾರೆ. ಪಾಕ್ನ ಲಷ್ಕರ್ ಎ ತೋಯ್ಬಾ ಉಗ್ರರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದು, 8 ಮಂದಿಯಲ್ಲಿ 6 ಮಂದಿಯನ್ನು ಎನ್ಐಎ ಅರೆಸ್ಟ್ ಮಾಡಿದೆ.
ಇಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದು, ಉಗ್ರವಾದಕ್ಕೆ ಪಿತೂರಿ, ಅತ್ಮಾಹುತಿ ದಾಳಿ ನಡೆಸಲು ಸ್ಕೆಚ್ ಹಾಕಿದ್ರು. ಕೇರಳ ಮೂಲದ ನಾಸಿರ್ ಸಂಚಿನ ಸೂತ್ರಧಾರಿಯಾಗಿದ್ದಾನೆ. ಉಗ್ರ ನಾಸೀರ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಜುನೈದ್, ಸಲ್ಮಾನ್ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ.
2023ರ ಜುಲೈನಲ್ಲಿ ಶಂಕಿತ ಉಗ್ರರನ್ನು ಅರೆಸ್ಟ್ ಮಾಡಲಾಗಿತ್ತು, ಸ್ಪೋಟಕಗಳ ತಡೆ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್ ದಾಖಲಾಗಿತ್ತು.
2017ರಲ್ಲಿ ಪರಪ್ಪನ ಅಗ್ರಹಾರ ಜೈಲಲ್ಲಿ ಒಟ್ಟಾಗಿ ಸೇರಿದ್ರು, ಜೈಲಿನಿಂದಲೇ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದರು.
ಶಂಕಿತ ಉಗ್ರ ನಾಸಿರ್ ಯುವಕರ ಬ್ರೈನ್ ವಾಶ್ ಮಾಡುತ್ತಿದ್ದ, ನಾಡಪಿಸ್ತೂಲ್, ಜೀವಂತ ಗುಂಡು, ವಾಕಿಟಾಕಿ, ಡ್ರ್ಯಾಗರ್, ಮೊಬೈಲ್ ಜಫ್ತಿ ಮಾಡಿದ್ದಾರೆ.
ಇದನ್ನೂ ಓದಿ : ಅರ್ಜುನ್ ಜನ್ಯ ನಿರ್ದೇಶನದ ’45’ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ..!