ಕೊಪ್ಪಳ : ಮೋದಿ ಮತ್ತೆ ಗೆದ್ದರೆ ತಮ್ಮ ದೇಗುಲವನ್ನು ತಾವೇ ಕಟ್ಟಿಕೊಳ್ತಾರೆ, ರಾಮನ ಮಂದಿರ ಆಯ್ತು ಈಗ ಮೋದಿ ಮಂದಿರ ಕಟ್ತಾರೇನೋ..? ಮೋದಿಯವರ ಮಾತು ಕೇಳ್ತಾ ಇದ್ರೆ ನನಗೆ ಹಾಗನ್ನಿಸುತ್ತೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಈ ಬಗ್ಗೆ ಕೊಪ್ಪಳದಲ್ಲಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಆ ದೇವರೇ ಮೋದಿಯವರನ್ನು ಭೂಮಿಗೆ ಕಳಿಸಿದ್ದಾನಂತೆ. ಪುರಿ ಜಗನ್ನಾಥನೂ ನನ್ನ ಭಕ್ತ ಎಂದು ಮೋದಿ ಹೇಳಿದ್ದಾರೆ. ಇದು ಮೋದಿಯವರ ಅಹಂಕಾರದ ಪರಮಾವಧಿ, ನಾವು ಜನರ ಸೇವಕರೇ ಹೊರತು ದೇವರುಗಳಲ್ಲ. 40 ವರ್ಷ ಆಳಿದ ಕಾಂಗ್ರೆಸ್ನ ಯಾರೂ ಇಂಥಾ ಹೇಳಿಕೆ ನೀಡಿಲ್ಲ ಎಂದಿದ್ದಾರೆ.
ವಾಜಪೇಯಿಯವರೂ ಇಂತಹ ಮಾತುಗಳನ್ನು ಆಡಲಿಲ್ಲ, ಮತ್ತೊಮ್ಮೆ ಗೆದ್ದರೆ ಇವ್ರು ಇನ್ನೇನ್ ಮಾಡ್ತಾರೋ ಗೊತ್ತಿಲ್ಲ ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ.
ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ IT ಅಧಿಕಾರಿಗಳ ಬೃಹತ್ ರೇಡ್ – 26 ಕೋಟಿ ನಗದು, 90 ಕೋಟಿ ಮೌಲ್ಯದ ಸಂಪತ್ತು ಜಪ್ತಿ..!
Post Views: 42