Download Our App

Follow us

Home » ಅಪರಾಧ » ಧಾರವಾಡದಲ್ಲಿ ಮದುವೆ ಮನೆಗೆ ನುಗ್ಗಿ ಕಳವು : ವಜ್ರ, ಚಿನ್ನ ಸಹಿತ ಹಣವಿದ್ದ ಬ್ಯಾಗ್​ ದೋಚಿದ ಕಳ್ಳರು..!

ಧಾರವಾಡದಲ್ಲಿ ಮದುವೆ ಮನೆಗೆ ನುಗ್ಗಿ ಕಳವು : ವಜ್ರ, ಚಿನ್ನ ಸಹಿತ ಹಣವಿದ್ದ ಬ್ಯಾಗ್​ ದೋಚಿದ ಕಳ್ಳರು..!

ಧಾರವಾಡ : ಇಂಜಿನಿಯರ್​ ಮಗನ ಮದುವೆ ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಘಟನೆ ಧಾರವಾಡದ ವಿದ್ಯಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಳ್ಳರು ವಜ್ರ, ಚಿನ್ನ ಸಹಿತ ಹಣವಿದ್ದ ಬ್ಯಾಗ್​ ದೋಚಿದ್ದಾರೆ.

ಸಣ್ಣ ನೀರಾವರಿ ಇಲಾಖೆ EE ಪುತ್ರನ ಮದುವೆಯಲ್ಲಿ ಕಳ್ಳತನವಾಗಿದೆ. ಗಂಗಾದರಪ್ಪ ಪಟ್ಟಣಶೆಟ್ಟಿ ಮಗ ಡಾ.ಶರಣಪ್ಪ ಮದುವೆ ಹುಬ್ಬಳ್ಳಿ ಅಧ್ಯಾಪಕನಗರದ ಅರುಣಕುಮಾರ ಪುತ್ರಿ ಡಾ.ಪೂಜಾ ಜತೆ ನಡೆಯುತ್ತಿತ್ತು. ಎಲ್ಲರೂ ಮದುವೆ ಸಂಭ್ರಮದಲ್ಲಿದ್ದಾಗ ಕಳ್ಳರು ಕೈಚಳಕ ತೋರಿಸಿದ್ದಾರೆ.

ಕಳ್ಳರು ಸುಮಾರು 800 ಗ್ರಾಂ ಚಿನ್ನ, ಲಕ್ಷಾಂತರ ಮೌಲ್ಯದ ವಜ್ರ, ಸುಮಾರು 50 ಲಕ್ಷ ರೂಪಾಯಿ ನಗದು ದೋಚಿದ್ದಾರೆ. ಆರೋಪಿಗಳು ಬ್ಯಾಗ್​​ನಲ್ಲಿ ಹಾಕ್ಕೊಂಡು ಹೋಗುವ ದೃಶ್ಯ CCTV ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ವಿದ್ಯಾಗಿರಿ ಠಾಣೆ ಪೊಲೀಸರಿಂದ ಮಾಹಿತಿ ಸಂಗ್ರಹವಾಗಿದೆ.

ಇದನ್ನೂ ಓದಿ : ಬೆಂಗಳೂರು : ಕಂತೆ ಕಂತೆ ಹಣದ ವೀಡಿಯೋ ತೋರಿಸಿ ಬಿಲ್ಡಪ್​​ ಕೊಟ್ಟು ವಂಚಿಸುತ್ತಿದ್ದ ವಂಚಕ ಅರೆಸ್ಟ್..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here