ಧಾರವಾಡ : ಇಂಜಿನಿಯರ್ ಮಗನ ಮದುವೆ ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಘಟನೆ ಧಾರವಾಡದ ವಿದ್ಯಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಳ್ಳರು ವಜ್ರ, ಚಿನ್ನ ಸಹಿತ ಹಣವಿದ್ದ ಬ್ಯಾಗ್ ದೋಚಿದ್ದಾರೆ.
ಸಣ್ಣ ನೀರಾವರಿ ಇಲಾಖೆ EE ಪುತ್ರನ ಮದುವೆಯಲ್ಲಿ ಕಳ್ಳತನವಾಗಿದೆ. ಗಂಗಾದರಪ್ಪ ಪಟ್ಟಣಶೆಟ್ಟಿ ಮಗ ಡಾ.ಶರಣಪ್ಪ ಮದುವೆ ಹುಬ್ಬಳ್ಳಿ ಅಧ್ಯಾಪಕನಗರದ ಅರುಣಕುಮಾರ ಪುತ್ರಿ ಡಾ.ಪೂಜಾ ಜತೆ ನಡೆಯುತ್ತಿತ್ತು. ಎಲ್ಲರೂ ಮದುವೆ ಸಂಭ್ರಮದಲ್ಲಿದ್ದಾಗ ಕಳ್ಳರು ಕೈಚಳಕ ತೋರಿಸಿದ್ದಾರೆ.
ಕಳ್ಳರು ಸುಮಾರು 800 ಗ್ರಾಂ ಚಿನ್ನ, ಲಕ್ಷಾಂತರ ಮೌಲ್ಯದ ವಜ್ರ, ಸುಮಾರು 50 ಲಕ್ಷ ರೂಪಾಯಿ ನಗದು ದೋಚಿದ್ದಾರೆ. ಆರೋಪಿಗಳು ಬ್ಯಾಗ್ನಲ್ಲಿ ಹಾಕ್ಕೊಂಡು ಹೋಗುವ ದೃಶ್ಯ CCTV ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ವಿದ್ಯಾಗಿರಿ ಠಾಣೆ ಪೊಲೀಸರಿಂದ ಮಾಹಿತಿ ಸಂಗ್ರಹವಾಗಿದೆ.
ಇದನ್ನೂ ಓದಿ : ಬೆಂಗಳೂರು : ಕಂತೆ ಕಂತೆ ಹಣದ ವೀಡಿಯೋ ತೋರಿಸಿ ಬಿಲ್ಡಪ್ ಕೊಟ್ಟು ವಂಚಿಸುತ್ತಿದ್ದ ವಂಚಕ ಅರೆಸ್ಟ್..!
Post Views: 179