ಬೆಂಗಳೂರು : ಹೈಕೋರ್ಟ್ನ ಪೀಠದ ಮುಂದೆಯೇ ವ್ಯಕ್ತಿಯೊಬ್ಬರು ಕೈಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಮೈಸೂರು ಮೂಲದ 51 ವರ್ಷದ ಶ್ರೀನಿವಾಸ್ ಎಂಬಾತ ರೇಜರ್ ಹಿಡಿದು ಕೊಯ್ದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾರೆ. ಈ ಘಟನೆ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ, ಡಾ. ನ್ಯಾ. ಪ್ರಭಾಕರ್ ಶಾಸ್ತ್ರಿ ಪೀಠದ ಮುಂಭಾಗದಲ್ಲಿ ನಡೆದಿದೆ.
ತಕ್ಷಣವೇ ಪೊಲೀಸರು ಶ್ರೀನಿವಾಸ್ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಆತ್ಮಹತ್ಯೆಗೆ ಯತ್ನಿಸಿದ ಶ್ರೀನಿವಾಸ್ಗೆ ಆಪರೇಷನ್ ನಡೆಯುತ್ತಿದೆ. ವಿಧಾನಸೌಧ ಠಾಣೆಯಲ್ಲಿ ಶ್ರೀನಿವಾಸ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
IPC 309, 425 ಅಡಿ ಸೂಸೈಡ್ಗೆ ಯತ್ನ, ಅಕ್ರಮವಾಗಿ ಆಯುಧ ತಂದ ಅಡಿ ಕೇಸ್ ದಾಖಲಾಗಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ದೂರು ನೀಡಲು ಶ್ರೀನಿವಾಸ್ ಚಿನ್ನಂ ಬಂದಿದ್ದ.
ಇದನ್ನೂ ಓದಿ : ಮೂರು ತಿಂಗಳ ಸಸ್ಪೆನ್ಸ್ಗೆ ಬ್ರೇಕ್ : ಮಂಡ್ಯ ಚುನಾವಣೆ ಕಣದಿಂದ ಹಿಂದೆ ಸರಿದ ಸುಮಲತಾ..!
Post Views: 112