ಬೆಂಗಳೂರು : ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಸಿದ ಆರೋಪದ ಮೇಲೆ ಬೆಂಗಳೂರು ಸೇರಿದಂತೆ ರಾಜ್ಯದ 60 ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು 13 ಮಂದಿ ಮೇಲೆ 60 ಸ್ಥಳಗಳಲ್ಲಿ ರೇಡ್ ಮಾಡಿದ್ದಾರೆ.
ಏಕಕಾಲಕ್ಕೆ 130 ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿದ್ದು, ಈ ವೇಳೆ BBMP ವಲಯದ ಚೀಫ್ ಎಂಜಿನಿಯರ್ ರಂಗನಾಥ್ ಮನೆಯಲ್ಲಿ ಚಿನ್ನಾಭರಣ, ಬೆಳ್ಳಿ, ನಗದು ಹಣ ಪತ್ತೆಯಾಗಿದೆ. 549 ಗ್ರಾಂ ಗೋಲ್ಡ್, 420 ಗ್ರಾಂ ಬೆಳ್ಳಿ, 7 ಲಕ್ಷ 98 ಸಾವಿರ ನಗದು ಪತ್ತೆಯಾಗಿದೆ.
ಅಷ್ಟೇ ಅಲ್ಲದೆ ಮಂಡ್ಯ ಪಂಚಾಯ್ತಿ ಸಹಾಯಕ ಅಕೌಂಟೆಂಟ್ ಮನೆಯಲ್ಲಿ ಚಿನ್ನದ ರಾಶಿ ಪತ್ತೆಯಾಗಿದೆ. ಮಳವಳ್ಳಿ ತಾಲೂಕು ಅಗಸನಪುರ ಪಂಚಾಯ್ತಿ SDAA ಕೃಷ್ಣೇಗೌಡ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ KRIDL EE ಸದಾಶಿವಯ್ಯ ಬಳಿ ಐಷಾರಾಮಿ ಕಟ್ಟಡದ ಮೇಲೂ ಲೋಕಯುಕ್ತ ದಾಳಿ ಮಾಡಿದೆ. ಈ ಮೂಲಕ ಎಂಜಿನಿಯರ್ಗಳು, ARTO, RFO ಸೇರಿ ಹಲವರಿಗೆ ಲೋಕಾ ಶಾಕ್ ನೀಡಿದೆ.
ರಾಜ್ಯಾದ್ಯಂತ ಭ್ರಷ್ಟರಿಗೆ ಲೋಕಾ ಶಾಕ್..! ಯಾರ್ಯಾರ ಮೇಲೆ ನಡೆದಿದೆ ಗೊತ್ತಾ ರೇಡ್..?
1. ರಂಗನಾಥ್- ಬಿಬಿಎಂಪಿ ಚೀಫ್ ಎಂಜಿನಿಯರ್, ಯಲಹಂಕ ಝೋನ್
2. ರೂಪಾ- ಉಡುಪಿ ಅಬಕಾರಿ ಡಿಸಿ
3. ಪ್ರಕಾಶ್- ಕಾರವಾರ ಜ್ಯೂನಿಯರ್ ಎಂಜಿನಿಯರ್
4. ಫಯಾಜ್ ಅಹ್ಮದ್- ಅಸಿಸ್ಟೆಂಟ್ ಎಂಜಿನಿಯರ್, ಮೈಸೂರು
5. ಜಯಣ್ಣ- ಚೀಫ್ ಎಕ್ಸ್ಕ್ಯೂಟಿವ್ ಆಫೀಸರ್ ಕೊಡಗು
6. ಯತೀಶ್- ರಾಮನಗರ ಜಿಲ್ಲೆ ಬಿಡದಿಯ ಮಾಚನಾಯನಕನಹಳ್ಳಿ PDO
7. ಮಹೇಶ್ ಚಂದ್ರಯ್ಯ ಹಿರೇಮಠ್, RFO, ಧಾರವಾಡ-
8. ಶಿವಕುಮಾರಸ್ವಾಮಿ- ಎಕ್ಸ್ಕ್ಯೂಟಿವ್ ಎಂಜಿನಿಯರ್, ಬೀದರ್
9. ನಾಗರಾಜಪ್ಪ, ಅಸಿಸ್ಟೆಂಟ್ ಡೈರೆಕ್ಟರ್, ಕೋಲಾರ
10. ಷಣ್ಮುಖಪ್ಪ- ಬಾಗಲಕೋಟೆ ಜಿಲ್ಲೆ ಜಮಖಂಡಿ ARTO
11. ಸದಾಶಿವಯ್ಯ- ಅಸಿಸ್ಟೆಂಟ್ ಎಕ್ಸ್ಕ್ಯೂಟಿವ್ ಎಂಜಿನಿಯರ್
12. ಕೃಷ್ಣೇಗೌಡ- ಸೆಕೆಂಡ್ ಡಿವಿಷನ್ ಅಕೌಂಟ್ ಅಸಿಸ್ಟೆಂಟ್, ಮಂಡ್ಯ
13. ಸದಾಶಿವ ಜಯಪ್ಪ- ಬೆಳಗಾವಿ ನಿಡಗುಂಡಿ PDO
ಇದನ್ನೂ ಓದಿ : ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ – ಬೆಂಗಳೂರು, ಚೆನ್ನೈ ಸೇರಿ ಹಲವೆಡೆ NIA ದಾಳಿ..!