Download Our App

Follow us

Home » ಅಪರಾಧ » 4 ವರ್ಷದ ಕಂದನ ಕೊಲ್ಲೋಕೆ ಸುಚನಾ ಮಾಡಿದ್ದೇನು ಗೊತ್ತಾ?

4 ವರ್ಷದ ಕಂದನ ಕೊಲ್ಲೋಕೆ ಸುಚನಾ ಮಾಡಿದ್ದೇನು ಗೊತ್ತಾ?

ಬೆಂಗಳೂರು : ಸ್ಟಾರ್ಟ್ಅಪ್ ಕಂಪನಿ ಸಿಇಒ ಸುಚನಾ ಸೇಠ್‌ ತನ್ನ 4 ವರ್ಷದ ಮಗುವನ್ನೇ ಕೊಂದು ಶವವನ್ನು ಸೂಟ್‌ಕೇಸ್‌ನಲ್ಲಿ ಹೊತ್ತೋಯ್ದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳುವಂತೆ ಮಾಡಿದೆ. 4 ವರ್ಷದ ಕಂದನ ಕೊಲ್ಲೋಕೆ ಸುಚನಾ ಮಾಡಿದ್ದೇನು ಗೊತ್ತಾ..?

ಸುಚನಾ ಉಳಿದಿದ್ದ ರೂಂನಲ್ಲಿ ಎರಡು ಸಿರಪ್​​ ಬಾಟಲಿ ಪತ್ತೆಯಾಗಿದ್ದು, ಗೋವಾ ಪೊಲೀಸರು ಕೆಮ್ಮಿನ ಸಿರಪ್​​​ ವಶಕ್ಕೆ ಪಡೆದಿದ್ದಾರೆ. ಸಾಯಿಸಲೆಂದೇ ಕೆಮ್ಮಿನ ಸಿರಪ್​ ನೀಡಿದ್ದಳಾ ಸುಚನಾ..?

ಗೋವಾ ಪೊಲೀಸರ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಪತ್ತೆಯಾಗಿದೆ. ಕ್ಯಾಂಡೋಲಿಮ್​​ ಸೋಲ್​ ಬ್ಯಾನಿಯನ್​​​ ಅಪಾರ್ಟ್​ಮೆಂಟ್​ ನಲ್ಲಿ ಪರಿಶೀಲನೆ ನಡೆಸಿದ್ದು, ಪೊಲೀಸ್ ಪರಿಶೀಲನೆ ವೇಳೆ ಖಾಲಿ ಬಾಟಲಿಗಳು ಪತ್ತೆಯಾಗಿದೆ.  ಉಸಿರುಗಟ್ಟಿಸುವಾಗ ನರಳಾಟ ನೋಡಬಾರದು ಎಂದು ಪ್ಲಾನ್​ ಮಾಡಿ, ಕೆಮ್ಮಿನ ಸಿರಪ್​ ನೀಡಿ ಮತ್ತು ಬರುವಂತೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸುಚನಾ ಅಪಾರ್ಟ್​ಮೆಂಟ್ ಸಿಬ್ಬಂದಿಯಿಂದ ನನಗೆ ಕೆಮ್ಮು-ನೆಗಡಿ ಇದೆ ಎಂದು ಸಿರಫ್​ ತರಿಸಿಕೊಂಡಿದ್ದಳು. ಸುಚನಾ ಜನವರಿ 4ರಂದು ಅಪಾರ್ಟ್​ಮೆಂಟ್​ಗೆ ಬಂದು ತಂಗಿದ್ದಳು. ಜನವರಿ 8ರಂದು ಚೆಕ್​​ಔಟ್​ ಆಗಿದ್ದಾಳೆ.

ಸುಚನಾ ಪತಿಯಿಂದ ತಿಂಗಳಿಗೆ 2.5 ಲಕ್ಷ ಜೀವನಾಂಶ ಕೇಳಿದ್ದಳಂತೆ,  ಪತಿ ವೆಂಕಟರಾಮನ್​​ ತಿಂಗಳಿಗೆ 10 ಲಕ್ಷ ದುಡಿಮೆ ಮಾಡುತ್ತಿದ್ದ. ಸುಚನಾ ಕೊಲೆ ಉದ್ದೇಶ ಇರಲಿಲ್ಲ ಎಂದು ಪೊಲೀಸರ ಮುಂದೆ ಹೇಳಿದ್ದಾಳೆ.  ಗೋವಾ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ.

ಇದನ್ನೂ ಓದಿ : ಫಿನಾಯಿಲ್ ಕುಡಿದು ಯುವಕ ಆ*ತ್ಮಹತ್ಯೆಗೆ ಯತ್ನ..

Leave a Comment

DG Ad

RELATED LATEST NEWS

Top Headlines

ದರ್ಶನ್​ಗೆ ಮತ್ತೊಂದು ಸಂಕಷ್ಟ – ಪ್ರೊಡ್ಯೂಸರ್ ಭರತ್​​​ಗೆ ಬೆದರಿಕೆ ಹಾಕಿದ್ದ ಕೇಸ್​ಗೆ ಮರುಜೀವ.. NCR ದಾಖಲು..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆಯಲು ಕಷ್ಟಪಡುತ್ತಿರುವಾಗಲೇ ನಟ ದರ್ಶನ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಹಿಂದೆ ಯಂಗ್​ ಪ್ರೊಡ್ಯೂಸರ್ ಭರತ್​ಗೆ ಬೆದರಿಕೆ ಹಾಕಿದ್ದ

Live Cricket

Add Your Heading Text Here