Download Our App

Follow us

Home » ರಾಜಕೀಯ » ನನ್ನ ಸರ್ವ ನಾಶ ಮಾಡೋದೇ ಹೆಚ್​ಡಿಡಿ ಫ್ಯಾಮಿಲಿ ಉದ್ದೇಶ – ಡಿಸಿಎಂ ಡಿಕೆಶಿ ಕಿಡಿ..!

ನನ್ನ ಸರ್ವ ನಾಶ ಮಾಡೋದೇ ಹೆಚ್​ಡಿಡಿ ಫ್ಯಾಮಿಲಿ ಉದ್ದೇಶ – ಡಿಸಿಎಂ ಡಿಕೆಶಿ ಕಿಡಿ..!

ಬೆಂಗಳೂರು : ತೀವ್ರ ವಿರೋಧದ ನಡುವೆ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾವಣೆ ಮಾಡಲು ನಿನ್ನೆ ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಇತ್ತ ಈ ಸಂಬಂಧ ಡಿಕೆಶಿ-ಹೆಚ್​​ಡಿಕೆ ನಡುವೆ ದಂಗಲ್ ಮುಂದುವರೆದಿದೆ.

ಈ ಬಗ್ಗೆ ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ನಾವೇ ರಾಮನಗರದವರು ಅವರು ಹಾಸನದಿಂದ ಬಂದವರು. ಇಲ್ಲೇ ನಾನು ಜಿಲ್ಲಾ ಪಂಚಾಯ್ತಿ ಮೆಂಬರ್​ ಆಗಿದ್ದೆ, ಕುಮಾರಸ್ವಾಮಿ, ದೇವೇಗೌಡರು ಹಾಸನದಿಂದ ಬಂದವರು. ನಾವು ಬೆಂಗಳೂರಿನವರು ಇಲ್ಲಿನವರು, ಅವರು ರಾಜಕೀಯ ಲಾಭಕ್ಕಾಗಿ ಡಿವೈಡ್ ಮಾಡಿದ್ರು ಎಂದಿದ್ದಾರೆ.

ಹೆಚ್​ಡಿಡಿ ಫ್ಯಾಮಿಲಿ ಮೇಲೆ ಡಿಕೆಶಿ ಗರಂ ಆಗಿ, ನನ್ನ ಸರ್ವ ನಾಶ ಮಾಡೋದೇ ಅವರ ಉದ್ದೇಶ, ರಾಮನಗರವೂ ನಮ್ಮದೇ ಮಾಗಡಿಯೂ ನಮ್ಮದೇ. ಬೆಂಗಳೂರಿಗೆ ಬ್ರ್ಯಾಂಡ್​ ಇದೆ, ನಾವ್ಯಾಕೆ ಆ ಬ್ರ್ಯಾಂಡ್​ ಬಿಡಬೇಕು ಎಂದು ಹೇಳಿದ್ದಾರೆ.

ಬೆಂಗಳೂರು ದಕ್ಷಿಣ ಹೆಸರು ಇಡೋದಕ್ಕೆ ನಿಖಿಲ್​ ವಿರೋಧ : ಈ ಸಂಬಂಧ ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಬೆಂಗಳೂರು ದಕ್ಷಿಣ ಎಂದಾಕ್ಷಣ ರಾಮನಗರ ಭೂಮಿ ಚಿನ್ನ ಆಗಲ್ಲ, ರಾಮನಗರಕ್ಕೆ ಒಂದು ಅಸ್ಮಿತೆ ಇದೆ, ಅದನ್ನು ಉಳಿಸಬೇಕು. ರಾಮನ ಹೆಸರನ್ನು ಬದಲಾವಣೆ ಮಾಡೋದು ಸರಿಯಲ್ಲ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆ ಮಾಡಿದ್ದು ಹೆಚ್​ಡಿಕೆ,
ಅವರೇ ನಾಳೆ ಮೀಟಿಂಗ್​​ ಮಾಡಿ ಹೋರಾಟದ ನಿರ್ಧಾರ ಕೈಗೊಳ್ತಾರೆ ಎಂದಿದ್ದಾರೆ.

ಇದನ್ನೂ ಓದಿ : ವಾಹನ ಸವಾರರೇ ಹುಷಾರ್… ಇನ್ಮುಂದೆ 130km ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸಿದರೆ ಬೀಳುತ್ತೆ ಎಫ್‌ಐಆರ್‌..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here