Download Our App

Follow us

Home » ಅಪರಾಧ » ಗದಗ : ಸೈಡ್​ಗೆ ಹೋಗು ಎಂದಿದ್ದಕ್ಕೆ ಬಸ್ಸಿನ ಗಾಜು ಪೀಸ್ ಪೀಸ್​ ಮಾಡಿದ ಯುವಕ..!

ಗದಗ : ಸೈಡ್​ಗೆ ಹೋಗು ಎಂದಿದ್ದಕ್ಕೆ ಬಸ್ಸಿನ ಗಾಜು ಪೀಸ್ ಪೀಸ್​ ಮಾಡಿದ ಯುವಕ..!

ಗದಗ : ಸೈಡ್​ಗೆ ಹೋಗು ಎಂದಿದ್ದಕ್ಕೆ ಯುವಕನೊಬ್ಬ ಬಸ್ಸಿನ ಗಾಜು ಪೀಸ್ ಪೀಸ್​ ಮಾಡಿದ ಘಟನೆ ಗದಗದ ಲಕ್ಷ್ಮೇಶ್ವರದಲ್ಲಿ ನಡೆದಿದೆ. ಸೂರಣಗಿ ಗ್ರಾಮದ ಪಟ್ಟಪ್ಪ ಅನ್ನೋ ಯುವಕ ಈ ಕೃತ್ಯವೆಸಗಿದ್ದಾನೆ.

ಕ್ಷುಲ್ಲಕ ಕಾರಣಕ್ಕೆ ಬಸ್ ಡ್ರೈವರ್​​ ಹಾಗೂ ಕಂಡಕ್ಟರ್​ ಜೊತೆ ಕಿರಿಕ್​ ಮಾಡಿ ಪುಂಡಾಟ ಮೆರೆದಿದ್ದಾನೆ. ಗುತ್ತಲ ಪಟ್ಟಣದಿಂದ ಸೂರಣಗಿ ಮಾರ್ಗವಾಗಿ ಲಕ್ಷ್ಮೇಶ್ವರಕ್ಕೆ ಬರುತ್ತಿದ್ದ ಬಸ್ ಗ್ರಾಮದ ಮಧ್ಯದಲ್ಲಿ ಕಿರಿದಾದ ರಸ್ತೆಯಲ್ಲಿ ಬರಬೇಕಿತ್ತು. ಈ ವೇಳೆ ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ ಯುವಕ ಪುಟ್ಟಪ್ಪ ಎಷ್ಟೇ ಹಾರ್ನ್​ ಹೊಡೆದರೂ ಸೈಡ್​ ಬಿಡದೇ ಕುಡಿದ ಮತ್ತಿನಲ್ಲಿ ಬಸ್​ ಮೇಲೆ ಕಲ್ಲು ತೂರಿದ್ದಾನೆ.

ಸದ್ಯ ಯುವಕ ಪರಾರಿಯಾಗಿದ್ದು, ಯುವಕ ಮಾಡಿದ ತಪ್ಪಿಗೆ ಆತನ ತಂದೆಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ : ಬಿಜೆಪಿ ಟಿಕೆಟ್ ಸಿಗದಿದ್ರೂ ಮಂಡ್ಯದಲ್ಲೇ ಸುಮಲತಾ ಸ್ಪರ್ಧೆ? ಇಂದು ಆಪ್ತರ ಜೊತೆ ಮಹತ್ವದ ಸಭೆ..!

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here