ಹಾವೇರಿ : ಹಾವೇರಿ ಲೋಕಸಭೆ ಟಿಕೆಟ್ಗಾಗಿ ಬಿಜೆಪಿಯಲ್ಲಿ ಮೂವರ ನಡುವೆ ಫೈಟ್ ನಡೆಯುತ್ತಿದೆ. ಕಾಂತೇಶ್ v/s ಸಂದೀಪ್ ಪಾಟೀಲ್ v/s ಬಸವರಾಜ ಬೊಮ್ಮಾಯಿ ಮಧ್ಯೆ ಲೋಕಸಭೆ ಟಿಕೆಟ್ಗಾಗಿ ಫೈಟ್ ನಡೆಯುತ್ತಿದೆ.
ಪುತ್ರ ಕಾಂತೇಶ್ಗೆ ಟಿಕೆಟ್ ಕೊಡಿಸೋಕೆ ಕೆ.ಎಸ್. ಈಶ್ವರಪ್ಪ ಸರ್ಕಸ್ ಮಾಡುತ್ತಿದ್ದು, ತಾವು ಮಾಡಿರೋ ತ್ಯಾಗಕ್ಕೆ ಪ್ರತಿಫಲ ಕೊಡಿ ಅಂತಾ ಈಶ್ವರಪ್ಪ ಕೇಳಿಕೊಂಡಿದ್ದಾರೆ. ಅಸೆಂಬ್ಲಿ ಚುನಾವಣೆಯಲ್ಲಿ ಹೈಕಮಾಂಡ್ ಆದೇಶ ಪಾಲಿಸಿದ್ದೇನೆ, ಪಕ್ಷ ನಿಷ್ಠೆಗೆ ಮಗನಿಗೆ ಟಿಕೆಟ್ ಕೊಡಿ ಎಂದು ಕೆ.ಎಸ್. ಈಶ್ವರಪ್ಪ ಡಿಮ್ಯಾಂಡ್ ಮಾಡಿದ್ದಾರೆ.
ಈಶ್ವರಪ್ಪ ಡಿಮ್ಯಾಂಡ್ ಬೆನ್ನಲ್ಲೇ ಹಾವೇರಿ ರೇಸ್ನಲ್ಲಿ ಮತ್ತೊಬ್ಬರ ಹೆಸರು ಕೇಳಿಬಂದಿದೆ. ಆಪ್ತ ವಕೀಲ ಸಂದೀಪ್ ಪಾಟೀಲ್ಗೆ ಟಿಕೆಟ್ ಕೊಡಿಸಲು ವಿಜಯೇಂದ್ರ ಯತ್ನಿಸುತ್ತಿದ್ದು, ಇದೆಲ್ಲದರ ಮಧ್ಯೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಲೋಕಸಭೆ ಟಿಕೆಟ್ಗಾಗಿ ಪ್ರಯತ್ನಿಸುತ್ತಿದ್ದಾರೆ. ವರಿಷ್ಠರ ಒಲವು ಇದ್ದಲ್ಲಿ ಅದೂ ಆಗುತ್ತೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಕೇಸರಿ ಟಿಕೆಟ್ಗೆ ಜಿದ್ದಿನ ಫೈಟ್ ನಡೆಯುತ್ತಿದ್ದು, ಲಿಂಗಾಯತ ವೋಟ್ಬ್ಯಾಂಕ್ ಇರೋ ಹಾವೇರಿ ಟಿಕೆಟ್ ಯಾರಿಗೆ..? ಹಾವೇರಿ ಅಖಾಡದಲ್ಲಿ ಯಾರಿಗೆ ಮಣೆ ಹಾಕುತ್ತೆ ಬಿಜೆಪಿ ಹೈಕಮಾಂಡ್..? ಈಶ್ವರಪ್ಪ ಪುತ್ರನಾ..? ವಿಜಯೇಂದ್ರ ಆಪ್ತನಾ..? ಬಸವರಾಜ ಬೊಮ್ಮಾಯಿನಾ..? ಎಂಬ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ 4 ಲಕ್ಷ ಮೌಲ್ಯದ KTM ಬೈಕ್ ಕದ್ದು ಕಿಲಾಡಿ ಕಳ್ಳ ಎಸ್ಕೇಪ್.. CCTVಯಲ್ಲಿ ದೃಶ್ಯ ಸೆರೆ..!