ವಿಜಯಪುರ : ವಿಜಯಪುರ ಜಿಲ್ಲೆಯ ತಾಳಿಕೋಟಿ ನಗರದ ಹೊರವಲಯದಲ್ಲಿ ಕುಡಿದ ಮತ್ತಲ್ಲಿ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸಿದ್ದಪ್ಪ ಶಿವಪ್ಪ ನಿಡಗುಂದಿ, ಸಮರ್ಥ ಶಿವಪ್ಪ ನಿಡಗುಂದಿ ಸಹಚರರು ಸೇರಿ ಕಂಟ ಪೂರ್ತಿ ಕುಡಿದು ಚಂದ್ರು ಬಬಲೇಶ್ವರ ಎನ್ನುವ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ.
ಚಂದ್ರು ಬಬಲೇಶ್ವರ ಕಳ್ಳತನ ಮಾಡಿದ್ದಾನೆಂಬ ಆರೋಪ ಹೊರಿಸಿ ಬೆನ್ನ ಮೇಲೆ ಬಾಸುಂಡೆ ಬರುವಂತೆ ಹೊಡೆದು ಕಲ್ಲು, ದೊಣ್ಣೆಗಳಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಯಾದ ಚಂದ್ರುವನ್ನು ಹೆಚ್ಚಿನ ಚಿಕಿತ್ಸಗೆಗಾಗಿ ಸರಕಾರಿ ಜಿಲ್ಲಾ ಆಸ್ಪತ್ರೆ ವಿಜಾಪುರಕ್ಕೆ ಸೇರಿಸಲಾಗಿದೆ.
ಈ ಬಗ್ಗೆ ತಾಳಿಕೋಟಿ ಪೊಲೀಸರಿಗೆ ದೂರು ಕೊಟ್ಟಿದ್ರು ಪೊಲೀಸರು ಯಾವುದೆ ಕ್ರಮ ತೆಗೆದುಕೊಳ್ತಾ ಇಲ್ಲ. ಮೇಲ್ನೋಟಕ್ಕೆ ಮಾತ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ : ಹಣ ಡಬಲ್ ಮಾಡೋ ಆಮಿಷ : ಕೋಟಿ-ಕೋಟಿ ಕಲೆಕ್ಟ್ ಮಾಡಿ ದಂಪತಿ ಎಸ್ಕೇಪ್..!
Post Views: 62