ಚಿತ್ರದುರ್ಗ : 5 ಲಕ್ಷ ಲಂಚ ನೀಡದ ಹಿನ್ನೆಲೆ ಗಣಿ ಹಾಗೂ ವಿಜ್ಞಾನ ಇಲಾಖೆ ವಿಜ್ಞಾನಿ ಕ್ರಷರ್ ಮಾಲೀಕನ ಮೇಲೆ ಹಲ್ಲೆ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಕ್ವಾರಿ ಹಾಗೂ ಕ್ರಷರ್ ಸ್ಟೋನ್ ಸಂಘದ ಜಿಲ್ಲಾ ಅಧ್ಯಕ್ಷ ಅಬ್ದುಲ್ ಮಜೀದ್ ಮೇಲೆ ಭೂ ವಿಜ್ಞಾನಿ ಮದುಸೂದನ್ ಎಂಬ ಅಧಿಕಾರಿ ಚಿತ್ರದುರ್ಗದ ಸಿರಿ ಹೋಟೆಲ್ನಲ್ಲಿ ಹಲ್ಲೆ ನಡೆಸಿದ್ದಾನೆ.
ಲಂಚ ನೀಡದ ಹಿನ್ನೆಲೆ ರಾತ್ರಿ ಪಾರ್ಟಿ ಕೊಡಿಸು ಎಂದು ಅಧಿಕಾರಿ ಕೇಳಿದ್ದು, ಪಾರ್ಟಿ ವೇಳೆ ಕುಡಿದ ಮತ್ತಿನಲ್ಲಿ ಲಂಚ ಕೊಟ್ಟಿಲ್ಲ ಎಂದು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಅಬ್ದುಲ್ ಮಜೀದ್ ಚಿತ್ರದುರ್ಗದ ತಮಟಕಲ್ಲು ಬಳಿಯ ಸ್ಟಾರ್ ಸ್ಟೋನ್ ಕ್ರಷರ್ ಮಾಲೀಕನಾಗಿದ್ದಾನೆ.
ಗಾಯಾಳು ಅಬ್ದುಲ್ ಮಜೀದ್ನ್ನು ಬೆಂಗಳೂರು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಭೂ ವಿಜ್ಞಾನಿ ಮದುಸೂದನ್ ಮೇಲೆ IPC ಸೆಕ್ಷನ್ 506, 504, 323, 324 ಅಡಿಯಲ್ಲಿ FIR ದಾಖಲಾಗಿದೆ. ಚಿತ್ರದುರ್ಗದ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ : ಇಂದಿನಿಂದ ವಿಧಾನಮಂಡಲ ಅಧಿವೇಶನ : ಫೆ. 16ಕ್ಕೆ ಬಜೆಟ್ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ..!