ಬಿಡದಿ : ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಿ.ಕೆ.ಸುರೇಶ್ ಅವರು ಚುನಾವಣಾ ಪ್ರಚಾರದಲ್ಲಿ ತಮ್ಮನ ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದೀಗ ಡಿಕೆ ಸುರೇಶ್ ಅವರು ಎಲೆಕ್ಷನ್ ಪ್ರಚಾರದ ಬ್ಯುಸಿಯ ನಡುವೆಯೂ ನಿನ್ನೆ ಬಿಡದಿಯಲ್ಲಿರುವ ಸುಪ್ರಸಿದ್ಧ ಗುರು ಹೋಟೆಲ್ನಲ್ಲಿ ತಟ್ಟೆ ಇಡ್ಲಿ ಸವಿದಿದ್ದು, ಈ ಬಗ್ಗೆ ಅವರು ತಮ್ಮ ಸಮಾಜಿಕ ಜಾಲತಾಣ ಖಾತೆಯಲ್ಲಿ ರುಚಿ ರುಚಿಯಾದ ತಟ್ಟೆ ಇಡ್ಲಿ ಸವಿದ ಕ್ಷಣದ ಬಗ್ಗೆ ಒಂದೆರಡು ಸಾಲುಗಳನ್ನು ಬರೆಯುವ ಮೂಲಕ ಪೋಟೊವನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
“ಇಂದು ಬಿಡದಿಯಲ್ಲಿರುವ ಗುರು ಹೋಟೆಲ್ನಲ್ಲಿ ತಟ್ಟೆ ಇಡ್ಲಿ ಸವಿದ ಕ್ಷಣ. ಬಿಡುವಿಲ್ಲದ ವೇಳೆಯಲ್ಲಿ ರುಚಿಕರವಾದ ತಿಂಡಿ ಸವಿದ ಕ್ಷಣ ಮನಸ್ಸಿಗೆ ಆನಂದ ನೀಡಿತು. ದೇಶದ ನಾನಾ ಕಡೆಗೆ ನಾನಾ ರೀತಿಯ ತಿಂಡಿ ತಿಂದಿರಬಹುದು. ಆದರೆ ನಮ್ಮ ಪ್ರಸಿದ್ಧ ಬಿಡದಿ ತಟ್ಟೆ ಇಡ್ಲಿ ತಂದುಕೊಡುವಷ್ಟು ತೃಪ್ತಿ ಇನ್ನೆಲ್ಲೂ ಸಿಗದು! “ ಎಂದು ಬರೆದುಕೊಂಡಿದ್ದಾರೆ.
ಸದ್ಯ ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಅಖಾಡ ಸಿದ್ಧವಾಗಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಲೋಕಸಭೆಗೆ ಸಿದ್ಧತೆ ಮಾಡಿಕೊಳ್ತಿದೆ. ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಅಖಾಡಕ್ಕಿಳಿದಿರುವುದು ಕುತೂಹಲ ಮೂಡಿಸಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿತ್ತು. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ‘ಕೈ’ ಹಿಡಿದಿದ್ದು ಬೆಂಗಳೂರು ಗ್ರಾಮಾಂತರ ಏಕೈಕ ಕ್ಷೇತ್ರ ಮಾತ್ರ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಡಿ.ಕೆ.ಸುರೇಶ್ ಗೆಲುವು ಸಾಧಿಸಿ ಪಾರ್ಲಿಮೆಂಟ್ ಪ್ರವೇಶಿಸಿದ್ದರು. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ 3 ಬಾರಿ ಡಿ.ಕೆ.ಸುರೇಶ್ ಆಯ್ಕೆಯಾಗಿದ್ದಾರೆ. ಇದೀಗ ಈ ಭದ್ರಕೋಟೆಯನ್ನು ಹೇಗಾದರು ಮಾಡಿ ಭೇದಿಸಬೇಕು ಎಂದು ಬಿಜೆಪಿ-ಜೆಡಿಎಸ್ ಮೈತ್ರಿ ಪಣ ತೊಟ್ಟಿದೆ. ಹೀಗಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿರುವ ಡಾ. ಸಿ.ಎನ್.ಮಂಜುನಾಥ್ ಅವರನ್ನು ಡಿ.ಕೆ.ಸುರೇಶ್ ವಿರುದ್ದ ಮೈತ್ರಿ ಪಕ್ಷಗಳು ಕಣಕ್ಕಿಳಿಸಿದೆ.
ಇದನ್ನೂ ಓದಿ : ಬಿಜೆಪಿಯಿಂದ ಕಣಕ್ಕಿಳಿದಿರುವ ಸೆಲೆಬ್ರಿಟಿಗಳು ಯಾರು ಗೊತ್ತಾ?