Download Our App

Follow us

Home » ರಾಜಕೀಯ » ಕೆಂಪೇಗೌಡ ದಿನಾಚರಣೆಗೆ ದಳಪತಿಗಳಿಗೆ ನೀಡದ ಆಹ್ವಾನ – ಮಿಸ್ಟೇಕ್ ಆಗಿದೆ ಎಂದ ಡಿಸಿಎಂ ಡಿಕೆಶಿ..!

ಕೆಂಪೇಗೌಡ ದಿನಾಚರಣೆಗೆ ದಳಪತಿಗಳಿಗೆ ನೀಡದ ಆಹ್ವಾನ – ಮಿಸ್ಟೇಕ್ ಆಗಿದೆ ಎಂದ ಡಿಸಿಎಂ ಡಿಕೆಶಿ..!

ಬೆಂಗಳೂರು : ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಯ ಆಹ್ವಾನ ಪತ್ರಿಕೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಕೇಂದ್ರ ಸಚಿವ  ಹೆಚ್ ಡಿ ಕುಮಾರಸ್ವಾಮಿ ಇಬ್ಬರ ಹೆಸರಿಲ್ಲದಿರುವುದು ವಿವಾದ ಸೃಷ್ಟಿಸಿತ್ತು.

ಈ ಬಗ್ಗೆ ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಪ್ರೋಟೋಕಾಲ್ ಪ್ರಕಾರ ಮಾಡಿದ್ದಾರೆ. ಹೆಚ್​​ಡಿ ದೇವೇಗೌಡ ಮತ್ತು ಕೇಂದ್ರ ಸಚಿವ  ಹೆಚ್​​ಡಿ ಕುಮಾರಸ್ವಾಮಿಯವರನ್ನು ಕರೆಯಬೇಕಿತ್ತು. ಏನೋ ಮಿಸ್ಟೇಕ್ ಮಾಡಿದ್ದಾರೆ, ಮುಂದೆ ಈ ರೀತಿ ಆಗಲ್ಲ ಎಲ್ಲಾ ಸಮುದಾಯದವರನ್ನೂ ಕರೆಯಬೇಕು. ದೇವೇಗೌಡರು ಹಾಸನದಿಂದ, ಕುಮಾರಸ್ವಾಮಿ ಮಂಡ್ಯ ರೆಪ್ರೆಸೆಂಟೇಟಿವ್ ಆಗಿದ್ದಾರೆ. ಹೀಗಾಗಿ ಇವರು ಏನೋ ಮಿಸ್ಟೇಕ್ ಮಾಡಿದ್ದಾರೆ. ಮುಂದೆ ಹೀಗೆ ಆಗಲ್ಲ ಎಂದಿದ್ದಾರೆ.

ಇದೇ ವೇಳೆ ಹೆಚ್ಚುವರಿ ಡಿಸಿಎಂ ವಿಚಾರ ಸಂಬಂಧ ಮಾತನಾಡಿ, ಯಾರು ಏನೂ ಬೇಕಾದರೂ ಹೇಳಲಿ ಅದನ್ನು ಬಹಿರಂವಾಗಿ ಚರ್ಚೆ ಮಾಡಲ್ಲ. ಹೈಕಮಾಂಡ್ ಇದೆ, ಅವರು ಏನು ತೀರ್ಮಾನ ಮಾಡ್ತಾರೆ ಮಾಡಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಐಟಿಸಿಟಿಯಲ್ಲಿ 8 ವಾಹನಗಳ ಗ್ಲಾಸ್ ಒಡೆದು ಅಟ್ಟಹಾಸ ಮೆರೆದ ಪುಂಡರು..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here