ಬೆಂಗಳೂರು : ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಯ ಆಹ್ವಾನ ಪತ್ರಿಕೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಇಬ್ಬರ ಹೆಸರಿಲ್ಲದಿರುವುದು ವಿವಾದ ಸೃಷ್ಟಿಸಿತ್ತು.
ಈ ಬಗ್ಗೆ ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಪ್ರೋಟೋಕಾಲ್ ಪ್ರಕಾರ ಮಾಡಿದ್ದಾರೆ. ಹೆಚ್ಡಿ ದೇವೇಗೌಡ ಮತ್ತು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿಯವರನ್ನು ಕರೆಯಬೇಕಿತ್ತು. ಏನೋ ಮಿಸ್ಟೇಕ್ ಮಾಡಿದ್ದಾರೆ, ಮುಂದೆ ಈ ರೀತಿ ಆಗಲ್ಲ ಎಲ್ಲಾ ಸಮುದಾಯದವರನ್ನೂ ಕರೆಯಬೇಕು. ದೇವೇಗೌಡರು ಹಾಸನದಿಂದ, ಕುಮಾರಸ್ವಾಮಿ ಮಂಡ್ಯ ರೆಪ್ರೆಸೆಂಟೇಟಿವ್ ಆಗಿದ್ದಾರೆ. ಹೀಗಾಗಿ ಇವರು ಏನೋ ಮಿಸ್ಟೇಕ್ ಮಾಡಿದ್ದಾರೆ. ಮುಂದೆ ಹೀಗೆ ಆಗಲ್ಲ ಎಂದಿದ್ದಾರೆ.
ಇದೇ ವೇಳೆ ಹೆಚ್ಚುವರಿ ಡಿಸಿಎಂ ವಿಚಾರ ಸಂಬಂಧ ಮಾತನಾಡಿ, ಯಾರು ಏನೂ ಬೇಕಾದರೂ ಹೇಳಲಿ ಅದನ್ನು ಬಹಿರಂವಾಗಿ ಚರ್ಚೆ ಮಾಡಲ್ಲ. ಹೈಕಮಾಂಡ್ ಇದೆ, ಅವರು ಏನು ತೀರ್ಮಾನ ಮಾಡ್ತಾರೆ ಮಾಡಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಐಟಿಸಿಟಿಯಲ್ಲಿ 8 ವಾಹನಗಳ ಗ್ಲಾಸ್ ಒಡೆದು ಅಟ್ಟಹಾಸ ಮೆರೆದ ಪುಂಡರು..!