Download Our App

Follow us

Home » ಅಪರಾಧ » ದಾವಣಗೆರೆ : ತಾಮ್ರದ ತಂತಿ, ಎಲೆಕ್ಟ್ರಿಕಲ್ ಸಾಮಗ್ರಿ ಎಗರಿಸಿದ್ದ ಖತರ್ನಾಕ್ ಕಳ್ಳರು ಅಂದರ್​​​​​..!

ದಾವಣಗೆರೆ : ತಾಮ್ರದ ತಂತಿ, ಎಲೆಕ್ಟ್ರಿಕಲ್ ಸಾಮಗ್ರಿ ಎಗರಿಸಿದ್ದ ಖತರ್ನಾಕ್ ಕಳ್ಳರು ಅಂದರ್​​​​​..!

ದಾವಣಗೆರೆ : ತಾಮ್ರದ ತಂತಿ ಮತ್ತು ಎಲೆಕ್ಟ್ರಿಕ್ ಸಾಮಗ್ರಿ ಎಗರಿಸಿದ್ದ ಖದೀಮರನ್ನ ದಾವಣಗೆರೆಯ ಹರಿಹರ ಪೋಲೀಸರು ಬಂಧಿಸಿದ್ದಾರೆ. ಹರಿಹರ ಮೂಲದ ಸೈಯದ್ ನೂರುದ್ದೀನ್, ಮೊಹ್ಮದ್ ಆಸೀಫ್, ಇರ್ಷದ್ ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳು ಕೊಟ್ರೇಶ್ ನಾಯ್ಕಗೆ ಸಂಬಂಧಿಸಿದ ಗ್ರೀನ್ ರಾಯಲ್ ಘಟಕದಲ್ಲಿ ಕಳ್ಳತನ ನಡೆಸಿದ್ದಾರೆ. ಪೈಪ್ಸ್ ಮತ್ತು ಸ್ಪೀಂಕ್ಲರ್ ತಯಾರಿಕಾ ಘಟಕದಲ್ಲಿ ಕೈಚಳಕ ತೋರಿದ ಕಳ್ಳರು ಘಟಕದಲ್ಲಿ 12 ಲಕ್ಷದ ಮೌಲ್ಯದ ಸಾಮಾಗ್ರಿ ಎಗರಿಸಿ ಪರಾರಿಯಾಗಿದ್ದರು.

ಈ ಸಂಬಂಧ ದಾವಣಗೆರೆ ಜಿಲ್ಲೆಯ ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹರಿಹರ ಪೋಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ  ತಾಮ್ರದ ತಂತಿ ಮತ್ತು ಎಲೆಕ್ಟ್ರಿಕಲ್ ಸಾಮಗ್ರಿ, ಕೃತ್ಯಕ್ಕೆ ಬಳಸಿದ ಓಮಿನಿ ಮತ್ತು 02 ಬೈಕ್​​ಗಳನ್ನು ಜಪ್ತಿ ಮಾಡಿದ್ದಾರೆ. ಇನ್ನು ಆರೋಪಿತರ ಮೇಲೆ ವಿವಿಧ ಠಾಣೆಯಲ್ಲಿ ಈ ಹಿಂದೆ ಹಲವು ಪ್ರಕರಣಗಳು ದಾಖಲಾಗಿದ್ದವು.

ಇದನ್ನೂ ಓದಿ : ದರ್ಶನ್​ ರಾಜಾತಿಥ್ಯ ಕೇಸ್​​ನಲ್ಲಿ ಪ್ರತ್ಯೇಕ ಮೂರು FIR ದಾಖಲು..!

Leave a Comment

DG Ad

RELATED LATEST NEWS

Top Headlines

ಬೆಂಗಳೂರು : ಆನ್​ಲೈನ್​ ಗೇಮ್​​ಗಾಗಿ ​​​ಅಣ್ಣನ ಮದುವೆಗಿಟ್ಟಿದ್ದ ಚಿನ್ನಾಭರಣ ಕದ್ದ ತಮ್ಮ ಅರೆಸ್ಟ್​​..!

ಬೆಂಗಳೂರು : ಆನ್​ಲೈನ್ ರಮ್ಮಿ ಗೇಮ್​​ನಿಂದ ಸೋತ ತಮ್ಮ ತನ್ನ ಅಣ್ಣನ ಮದುವೆಗಾಗಿ ಇಟ್ಟಿದ್ದ ಚಿನ್ನಾಭರಣ ಕದ್ದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ

Live Cricket

Add Your Heading Text Here