ದಾವಣಗೆರೆ : ತಾಮ್ರದ ತಂತಿ ಮತ್ತು ಎಲೆಕ್ಟ್ರಿಕ್ ಸಾಮಗ್ರಿ ಎಗರಿಸಿದ್ದ ಖದೀಮರನ್ನ ದಾವಣಗೆರೆಯ ಹರಿಹರ ಪೋಲೀಸರು ಬಂಧಿಸಿದ್ದಾರೆ. ಹರಿಹರ ಮೂಲದ ಸೈಯದ್ ನೂರುದ್ದೀನ್, ಮೊಹ್ಮದ್ ಆಸೀಫ್, ಇರ್ಷದ್ ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳು ಕೊಟ್ರೇಶ್ ನಾಯ್ಕಗೆ ಸಂಬಂಧಿಸಿದ ಗ್ರೀನ್ ರಾಯಲ್ ಘಟಕದಲ್ಲಿ ಕಳ್ಳತನ ನಡೆಸಿದ್ದಾರೆ. ಪೈಪ್ಸ್ ಮತ್ತು ಸ್ಪೀಂಕ್ಲರ್ ತಯಾರಿಕಾ ಘಟಕದಲ್ಲಿ ಕೈಚಳಕ ತೋರಿದ ಕಳ್ಳರು ಘಟಕದಲ್ಲಿ 12 ಲಕ್ಷದ ಮೌಲ್ಯದ ಸಾಮಾಗ್ರಿ ಎಗರಿಸಿ ಪರಾರಿಯಾಗಿದ್ದರು.
ಈ ಸಂಬಂಧ ದಾವಣಗೆರೆ ಜಿಲ್ಲೆಯ ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹರಿಹರ ಪೋಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ತಾಮ್ರದ ತಂತಿ ಮತ್ತು ಎಲೆಕ್ಟ್ರಿಕಲ್ ಸಾಮಗ್ರಿ, ಕೃತ್ಯಕ್ಕೆ ಬಳಸಿದ ಓಮಿನಿ ಮತ್ತು 02 ಬೈಕ್ಗಳನ್ನು ಜಪ್ತಿ ಮಾಡಿದ್ದಾರೆ. ಇನ್ನು ಆರೋಪಿತರ ಮೇಲೆ ವಿವಿಧ ಠಾಣೆಯಲ್ಲಿ ಈ ಹಿಂದೆ ಹಲವು ಪ್ರಕರಣಗಳು ದಾಖಲಾಗಿದ್ದವು.
ಇದನ್ನೂ ಓದಿ : ದರ್ಶನ್ ರಾಜಾತಿಥ್ಯ ಕೇಸ್ನಲ್ಲಿ ಪ್ರತ್ಯೇಕ ಮೂರು FIR ದಾಖಲು..!