ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಬಿದ್ದಿದ್ದು, 4 ವರ್ಷಗಳ ವೈವಾಹಿಕ ಬದುಕಿಗೆ ಇಬ್ಬರೂ ಅಂತ್ಯ ಹಾಡಿದ್ದಾರೆ. ಇವರಿಬ್ಬರು ವಿಚ್ಛೇದನದ ಬಳಿಕ ಸಿಕ್ಕಾಪಟ್ಟೆ ಸುದ್ದಿ ಆಗ್ತಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. ಚಂದನ್ ಶೆಟ್ಟಿ, ನಿವೇದಿತಾ ಗೌಡ ವಿಚ್ಛೇದನ ಮಂಜೂರು ಮಾಡಿ ಬೆಂಗಳೂರು ಕೌಟುಂಬಿಕ ನ್ಯಾಯಾಲಯ ಆದೇಶ ಹೊರಡಿಸಿತ್ತು.
ಸೋಶಿಯಲ್ ಮೀಡಿಯಾದ ಮೂಲಕ ಡಿವೋರ್ಸ್ ಘೋಷಿಸಿದ ಚಂದನ್ ಶೆಟ್ಟಿ – ನಿವೇದಿತಾ ಗೌಡ ಇದೀಗ ಬೆಂಗಳೂರಿನ ಎಂ.ಎಂ.ಬಿ ಲೆಗಸಿ ಜಿ.ಟಿ ಮಾಲ್ನಲ್ಲಿ ಸುದ್ದಿಗೋಷ್ಠಿ ಕರೆದಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಮಾಜಿ ದಂಪತಿ ಡಿವೋರ್ಸ್ಗೆ ಕಾರಣವೇನು ಅನ್ನೊದನ್ನು ಬಿಚ್ಚಿಡ್ತಾರಾ ಅನ್ನೊ ಕಾತುರ ಹುಟ್ಟಿಕೊಂಡಿದೆ.
ವಿಚ್ಛೇದನ ಸುದ್ದಿ ಹೊರಬೀಳುತ್ತಿದ್ದಂತೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ. ಈ ಬಗ್ಗೆ ನಾನಾ ವದಂತಿಗಳು ಹರಿದಾಡುತ್ತಿದೆ ಈ ಹಿನ್ನೆಲೆ ಇಬ್ಬರು ಜಂಟಿಯಾಗಿ ಸುದ್ದಿಗೋಷ್ಠಿ ಕರೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ರೂಮರ್ಸ್ ಗಳಿಗೆ ತೆರೆ ಎಳೆಯುವ ಸಾಧ್ಯತೆ ಇದೆ. ಚಂದನ್ ಹಾಗೂ ನಿವೇದಿತಾ ಪರ ವಕೀಲರು ಇಬ್ಬರ ಡಿವೋರ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ್ದರು. ಖಾಸಗಿ ಮಾಧ್ಯಮದ ಸಂದರ್ಶನದಲ್ಲಿ ಮಾತಾಡಿದ್ದ ವಕೀಲರಾದ ಅನಿತಾ, ಚಂದನ್ ಹಾಗೂ ನಿವೇದಿತಾ ವಿಚ್ಛೇದನದ ಬಗ್ಗೆ ತಪ್ಪಾಗಿ ತೋರಿಸಲಾಗ್ತಿದೆ ಎಂದು ಹೇಳಿದ್ದರು.
ವಿಚ್ಛೇದನ ಪಡೆಯಲು ದೊಡ್ಡ ಮನಸ್ತಾಪವೇ ಆಗಬೇಕಾಗಿಲ್ಲ. ಚಿಕ್ಕ-ಚಿಕ್ಕ ವಿಷಯಗಳಿಗೂ ಭಿನ್ನಾಭಿಪ್ರಾಯ ಉಂಟಾಗುತ್ತದೆ. ತಮ್ಮ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಕೆಲವು ತ್ಯಾಗ ಮಾಡಬೇಕಾಗುತ್ತದೆ ಎಂದು ಅನಿತಾ ಹೇಳಿದ್ದಾರೆ. ಅನಿತಾ ಮಾತು ಕೇಳಿದ್ರೆ ಇಬ್ಬರು ಕೆರಿಯರ್ ವಿಚಾರಕ್ಕಾಗಿಯೇ ಡಿವೋರ್ಸ್ ಪಡೆದಿದ್ದಾರೆ ಎಂದು ನೆಟ್ಟಿಗರು ಹೇಳ್ತಿದ್ದಾರೆ. ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿಯಾಗಿದ್ದ ಚಂದನ್-ನಿವಿ ಇದೀಗ ದೂರ ದೂರವಾಗಿದ್ದಾರೆ. ಇಬ್ಬರ ವಿಚ್ಛೇದನಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಆದರೆ ಇದೀಗ ಈ ಸುದ್ದಿಗೋಷ್ಠಿ ಮೂಲಕ ಡಿವೋರ್ಸ್ಗೆ ಕಾರಣವೇನು ಅನ್ನೊ ಪ್ರಶ್ನೆಗೆ ತೆರೆ ಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ : ಇದು ಬಿಟಿವಿಯ ಬಿಗ್ ಇಂಪ್ಯಾಕ್ಟ್ : ಇಲಾಖೆಯ ಪರಿಶೀಲನೆಯಲ್ಲೇ ಗುಡ್ವಿಲ್ ಕಾಲೇಜ್ನ ಮಹಾವಂಚನೆ ಬಯಲು..!