ಹಾಸನ : ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತ ನವೀನ್ಗೌಡ ವಿರುದ್ಧ ಹಾಸನ SEN ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಪೂರ್ಣಚಂದ್ರ ತೇಜಸ್ವಿ ಎಂಬುವವರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ.
ಪೂರ್ಣಚಂದ್ರ ತೇಜಸ್ವಿ ಎಂಬುವವರ ನೀಡಿದ ದೂರಿನ ಮೇರೆಗೆ ಜಮೀರ್ ಅಹ್ಮದ್ ಶಿಷ್ಯ ನವೀನ್ ಗೌಡ ಸೇರಿ ಜೊತೆಗಾರರ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ. ಫೋಟೋ ಮಾರ್ಫ್ ಮಾಡಿ ವಿಡಿಯೋ ರೆಡಿ ಮಾಡಿದ್ದಾರೆ.
ವಿಡಿಯೋವನ್ನು ಪೆನ್ ಡ್ರೈವ್, ಸಿಡಿ ಮೂಲಕ ಹಂಚಿದ್ದಾರೆ. ಹಾಸನದ ಮನೆ-ಮನೆಗೂ ಹಂಚಿಕೆ ಮಾಡಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಜನರ ದಿಕ್ಕು ತಪ್ಪಿಸಿದ್ದಾರೆ. ನವೀನ್ ಗೌಡ ಮೇಲೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಕರ್ನಾಟಕಕ್ಕೆ ಬಿಜೆಪಿ ಸರ್ಕಾರ ನೀಡಿದ್ದು ಖಾಲಿ ಚೊಂಬು : ರಣದೀಪ್ ಸುರ್ಜೆವಾಲಾ ಕಿಡಿ..!
Post Views: 637