ಗುಲ್ಬರ್ಗ : ಬಿಜೆಪಿಯವರು ಮೀಸಲಾತಿ ವಿರೋಧಿಗಳು, ಮಂಡಲ್ ಕಮಿಷನ್ ಶಿಫಾರಸು ವಿರೋಧಿಸಿದ್ದೇ ಬಿಜೆಪಿ. ಹಿಂದುಳಿದವರಿಗೆ ಶೇ.27ರಷ್ಟು ಮೀಸಲು ಬಿಜೆಪಿ ಒಪ್ಪಿರಲಿಲ್ಲ, ಈಗ ಹಿಂದುಳಿದವರ ಮೀಸಲಾತಿ ಬಗ್ಗೆ ಬೊಬ್ಬೆ ಹೊಡೆಯುತ್ತಿದೆ. ಪ್ರಧಾನಿ ಮಂತ್ರಿ ಮೋದಿಯವರು ಮೀಸಲು ಬಗ್ಗೆ ಮಾತ್ನಾಡ್ತಿದ್ದಾರೆ, ಮುಸ್ಲಿಮರ ಮೀಸಲು ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಈ ಬಗ್ಗೆ ಗುಲ್ಬರ್ಗದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, 1995ರಲ್ಲೇ ಮುಸ್ಲಿಮರಿಗೆ ಮೀಸಲು ಕಲ್ಪಿಸಲಾಗಿದೆ. 2Bಯಲ್ಲಿ ಕಳೆದ 20 ವರ್ಷದಿಂದ ಮೀಸಲು ಕಲ್ಪಿಸಲಾಗಿದೆ, ಮೀಸಲಾತಿ ಶೇ.50ರಷ್ಟನ್ನು ಮೀರುವಂತಿಲ್ಲ ಅಂತಾ ಸಂವಿಧಾನ ಹೇಳಿದೆ. ಪ್ರಧಾನಿ ಘನತೆ ಮರೆತು ಮೋದಿ ಮಾತಾಡ್ತಿದ್ದಾರೆ ಎಂದು ಗುಡುಗಿದ್ದಾರೆ.
ನಾವು 18,174 ಕೋಟಿ ಕೇಳಿದ್ದೆವು, ಆದರೆ ಈಗ 3454 ಕೋಟಿ ಮಾತ್ರ ರಿಲೀಸ್ ಮಾಡಿದ್ದಾರೆ. ಈಗ ರಿಲೀಸ್ ಮಾಡಿರೋ ಹಣ ತುಂಬಾ ಕಡಿಮೆ, ಅಧಿಕಾರಿಗಳ ಜತೆ ಚರ್ಚಿಸಿ ಮುಂದೆ ಏನ್ ಮಾಡ್ಬೇಕು ನಿರ್ಧರಿಸುವೆ. ಒಂದು ವಾರದಲ್ಲಿ ಬರಿಹಾರ ಕೊಡ್ತೀವಿ ಅಂತಾ ಒಪ್ಪಿಕೊಂಡಿದ್ದರು, ಬರ ಪರಿಹಾರ ವಿಚಾರದಲ್ಲಿ ಕೇಂದ್ರದ ಮಂತ್ರಿಗಳು ಸುಳ್ಳು ಹೇಳಿದ್ದಾರೆ. ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಸುಳ್ಳು ಹೇಳಿದ್ರು, ಬರ ಪರಿಹಾರ ನೀಡುವಲ್ಲೂ ಅನ್ಯಾಯ ಮಾಡಲಾಗ್ತಿದೆ ಎಂದು ಕೇಂದ್ರದ ವಿರುದ್ಧ ಸಿಎಂ ಸಿದ್ದು ಹರಿಹಾಯ್ದಿದ್ದಾರೆ.
ಇದನ್ನೂ ಓದಿ : ಇಂದು ಬಾಗಲಕೋಟೆಯಲ್ಲಿ ಸಿಎಂ ಸಿದ್ದು ಪ್ರಚಾರ : ಸಂಯುಕ್ತಾ ಪಾಟೀಲ್ ಪರ ರೋಡ್ ಶೋ..!