Download Our App

Follow us

Home » ರಾಜ್ಯ » ತ್ರಿಬಲ್‌ ಮರ್ಡರ್ ಕೇಸ್​ ಆರೋಪಿಗೆ BIAAPA ಅಧ್ಯಕ್ಷ ಸ್ಥಾನ – ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ..!

ತ್ರಿಬಲ್‌ ಮರ್ಡರ್ ಕೇಸ್​ ಆರೋಪಿಗೆ BIAAPA ಅಧ್ಯಕ್ಷ ಸ್ಥಾನ – ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ..!

ಬೆಂಗಳೂರು : ತ್ರಿಬಲ್‌ ಮರ್ಡರ್ ಕೇಸ್​ ಆರೋಪಿಗೆ ಬೆಂಗಳೂರು ಅಂತರಾಷ್ಟ್ರೀಯ ಏರ್​​ಪೋರ್ಟ್​ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (BIAAPA) ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಸರ್ಕಾರವನ್ನು ರಾಜ್ಯ ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ. ಸರ್ಕಾರಕ್ಕೆ ತುರ್ತು ನೋಟಿಸ್​ ಜಾರಿ ಮಾಡಿ ಉತ್ತರಿಸಲು ಹೈಕೋರ್ಟ್ ಸೂಚಿಸಿದೆ.

ತ್ರಿಬಲ್‌ ಮರ್ಡರ್ ಆರೋಪಿ ಶಾಂತಕುಮಾರ್ ಸುಳ್ಳು ಮಾಹಿತಿ ನೀಡಿ ‘ಬೈಯಪ’ ಅಧ್ಯಕ್ಷ ಸ್ಥಾನ ಪಡೆದಿದ್ದು, ಶಾಂತಕುಮಾರ್ ಮೇಲೆ ತ್ರಿಬಲ್ ಮರ್ಡರ್ ಕೇಸ್ ಸೇರಿ 10ಕ್ಕೂ ಹೆಚ್ಚು ಪ್ರಕರಣಗಳಿವೆ. 2010ರಲ್ಲಿ ತ್ರಿಬಲ್ ಮರ್ಡರ್ ಕೇಸ್ ಶಾಂತಕುಮಾರ್ ಆರೋಪಿಯಾಗಿದ್ದ. ಶಾಂತಕುಮಾರ್ ವಿರುದ್ದ ವಿಶ್ವನಾಥಪುರ ಠಾಣೆಯಲ್ಲಿ 6ಕ್ಕೂ ಹೆಚ್ಚು ಪ್ರಕರಣಗಳು ಕೂಡ ದಾಖಲಾಗಿವೆ. ಅಲ್ಲದೆ, ಶಾಂತಕುಮಾರ್​ಗೆ ತನ್ನದೇ ಆದ SMS ಬಿಲ್ಡರ್ಸ್ ಅನ್ನೊ ರಿಯಲ್ ಎಸ್ಟೇಟ್ ಕಂಪನಿ ಇದೆ‌. SMS ಬಿಲ್ಡರ್ಸ್, ಪಂಚಮಿ ಡೆವಲಪರ್ಸ್, ಪ್ರೆಸಿಡೆನ್ಸಿ ಡೆವಲಪರ್ಸ್, ಜ್ಞಾನ ಕುಟೀರ ಡೆವಲಪರ್ಸ್, ಶಿಕ್ಷಕರ ಬಡವಾಣೆಯ ​ನಿರ್ದೇಶಕರೂ ಆಗಿದ್ದಾರೆ.

ಇಷ್ಟೆಲ್ಲ ಇದ್ರೂ ಇದರ ಮಾಹಿತಿ ಪಡೆಯದೆ ಸರ್ಕಾರ ಶಾಂತಕುಮಾರ್​ಗೆ ಬೈಯಪ ಅಧ್ಯಕ್ಷ ಸ್ಥಾನ ನೀಡಿದೆ. ಬೈಯಪ ಅಧ್ಯಕ್ಷರಾಗಿ ತನ್ನ ಕಂಪೆನಿಯ ಲ್ಯಾಂಡ್​ಗಳನ್ನ ಸುಲಭವಾಗಿ ಕನ್ವರ್ಷನ್ ಮಾಡಬಹುದು. ಈಗಾಗಲೇ ಕನ್ವರ್ಷನ್ ಮಾಡಿ ಅಕ್ರಮವಾಗಿ ಹಣಗಳಿಸಲು ಮುಂದಾಗಿದ್ದಾರೆ ಎಂಬ ಆರೋಪ ಕೂಡ ಶಾಂತಕುಮಾರ್ ಮೇಲೆ ಕೇಳಿಬಂದಿದೆ.

ಸದ್ಯ ಪ್ರಕರಣ ಸಂಬಂದ ಹೈಕೋರ್ಟ್​ಗೆ ದೇವರಾಜ್ DM ಅರ್ಜಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರದ ವಿರುದ್ದ ಗರಂ ಆಗಿದ್ದು, ಸದ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಬೈಯಪ, BMRDA ಮತ್ತು ಶಾಂತಕುಮಾರ್​ಗೆ ತುರ್ತು ನೋಟಿಸ್ ನೀಡಿದೆ. ಈ ತಿಂಗಳ 20ನೇ ತಾರೀಖಿನೊಳಗೆ ನೊಟೀಸ್​ಗೆ ಉತ್ತರಿಸಲು ಕೋರ್ಟ್ ಸೂಚಿಸಿದೆ.

ಇದನ್ನೂ ಓದಿ : ಯುವ ಡಿವೋರ್ಸ್​ಗೆ ಸಪ್ತಮಿ ಗೌಡ ಕಾರಣ.. ನೋಟಿಸ್​ನಲ್ಲಿ ಹೆಸರು ಉಲ್ಲೇಖಿಸಿದ ಶ್ರೀದೇವಿ..!

 

 

 

 

 

 

 

 

 

Leave a Comment

DG Ad

RELATED LATEST NEWS

Top Headlines

ವಾಲ್ಮೀಕಿ ಹಗರಣ – ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ 10 ಕೆ.ಜಿ‌ ಚಿನ್ನದ ಬಿಸ್ಕೆಟ್ SIT ವಶಕ್ಕೆ..!

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಸಂಬಂಧ ತನಿಖೆಯನ್ನ SIT ಚುರುಕುಗೊಳಿಸಿದೆ. ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ ಬರೋಬ್ಬರಿ 10 ಕೆ.ಜಿ‌ ಚಿನ್ನದ

Live Cricket

Add Your Heading Text Here