ಬೆಂಗಳೂರು : ಮನೆ ಮಾಲೀಕರಿಗೆ ಸಿನಿಮಾ ಕಥೆ ಕಟ್ಟಿ ಕಳ್ಳತನ ಮಾಡಿದ್ದ ಕಳ್ಳಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಶಾಂತ ಬಂಧಿತ ಮನೆಗಳ್ಳಿಯಾಗಿದ್ದು, ಸದಾಶಿವನಗರ ಪೊಲೀಸರು ಕಾರ್ಯಚರಣೆ ನಡೆಸಿ ಕಳ್ಳಿಯನ್ನ ಬಂಧಿಸಿದ್ದಾರೆ.
ಮೂರು ವರ್ಷದಿಂದ ಶಾಂತ ಸದಾಶಿವನಗರದ ಕೀರ್ತಿವರ್ಧನ್ ಎಂಬುವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಮನೆ ಮಾಲೀಕರು ಕುಟುಂಬ ಸಮೇತ ವಿದೇಶಕ್ಕೆ ಹೋಗಿದ್ರು. ಆ ವೇಳೆ ಮನೆಯಲ್ಲಿದ್ದ 10 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿದ್ದವು. ಬಳಿಕ ಮನೆ ಮಾಲೀಕರು ವಿದೇಶದಿಂದ ವಾಪಸ್ಸು ಬಂದಾಗ ಕಳ್ಳರಿಂದ ಕಳ್ಳತನವಾಗಿದೆ ಎಂದು ಶಾಂತ ಕಥೆ ಕಟ್ಟಿದ್ದಳು.
ನಾನು ಮಲಗಿದ್ದಾಗ ಇಬ್ಬರು ಕಳ್ಳರು ಬಂದು ಹಲ್ಲೆಮಾಡಿ ಕಳ್ಳತನ ಮಾಡಿದ್ದಾಗಿ ಕಥೆ ಕಟ್ಟಿದ್ದಳು. ಕೆಲಸದವಳ ಮಾತು ನಂಬಿ ಅಪರಿಚಿತ ಕಳ್ಳರಿಂದ ಕಳವಾಗಿರುವ ಬಗ್ಗೆ ಮನೆ ಮಾಲೀಕ ಕೀರ್ತಿವರ್ದನ್ ಸದಾಶಿವನಗರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ಭರ್ಜರಿ ತನಿಖೆ ವೇಳೆ ಮನೆ ಕೆಲಸದಾಕೆ ಶಾಂತಳಿಂದಲೇ ಚಿನ್ನಾಭರಣ ಕಳವಾಗಿರುದು ಪತ್ತೆಯಾಗಿದೆ. ಪ್ರಕರಣ ಭೇದಿಸಿ ಶಾಂತ ರನ್ನು ಬಂಧಿಸಿ10 ಲಕ್ಷ ಮೌಲ್ಯದ ಚಿನ್ನಾಭರಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಊಸರವಳ್ಳಿ ಪಕ್ಷ – ಸಿಎಂ ಸಿದ್ದುಗೆ ಟ್ವೀಟ್ನಲ್ಲೇ ತಿರುಗೇಟು ನೀಡಿದ ಜೆಡಿಎಸ್..!