Download Our App

Follow us

Home » ಅಪರಾಧ » ಬೆಂಗಳೂರು : ಮನೆ ಮಾಲೀಕರಿಗೆ ಸಿನಿಮಾ ಕಥೆ ಕಟ್ಟಿ 10 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಕಳ್ಳಿ ಅರೆಸ್ಟ್..!

ಬೆಂಗಳೂರು : ಮನೆ ಮಾಲೀಕರಿಗೆ ಸಿನಿಮಾ ಕಥೆ ಕಟ್ಟಿ 10 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಕಳ್ಳಿ ಅರೆಸ್ಟ್..!

ಬೆಂಗಳೂರು : ಮನೆ ಮಾಲೀಕರಿಗೆ ಸಿನಿಮಾ ಕಥೆ ಕಟ್ಟಿ ಕಳ್ಳತನ ಮಾಡಿದ್ದ ಕಳ್ಳಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಶಾಂತ ಬಂಧಿತ ಮನೆಗಳ್ಳಿಯಾಗಿದ್ದು, ಸದಾಶಿವನಗರ ಪೊಲೀಸರು ಕಾರ್ಯಚರಣೆ ನಡೆಸಿ ಕಳ್ಳಿಯನ್ನ ಬಂಧಿಸಿದ್ದಾರೆ.

ಮೂರು ವರ್ಷದಿಂದ  ಶಾಂತ ಸದಾಶಿವನಗರದ ಕೀರ್ತಿವರ್ಧನ್ ಎಂಬುವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಮನೆ ಮಾಲೀಕರು ಕುಟುಂಬ ಸಮೇತ ವಿದೇಶಕ್ಕೆ ಹೋಗಿದ್ರು. ಆ ವೇಳೆ ಮನೆಯಲ್ಲಿದ್ದ 10 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿದ್ದವು. ಬಳಿಕ ಮನೆ ಮಾಲೀಕರು ವಿದೇಶದಿಂದ ವಾಪಸ್ಸು ಬಂದಾಗ ಕಳ್ಳರಿಂದ ಕಳ್ಳತನವಾಗಿದೆ ಎಂದು ಶಾಂತ ಕಥೆ  ಕಟ್ಟಿದ್ದಳು.

ನಾನು ಮಲಗಿದ್ದಾಗ ಇಬ್ಬರು ಕಳ್ಳರು ಬಂದು ಹಲ್ಲೆ‌ಮಾಡಿ ಕಳ್ಳತನ‌ ಮಾಡಿದ್ದಾಗಿ ಕಥೆ ಕಟ್ಟಿದ್ದಳು. ಕೆಲಸದವಳ ಮಾತು ನಂಬಿ ಅಪರಿಚಿತ ಕಳ್ಳರಿಂದ ಕಳವಾಗಿರುವ ಬಗ್ಗೆ ಮನೆ ಮಾಲೀಕ ಕೀರ್ತಿವರ್ದನ್ ಸದಾಶಿವನಗರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ಭರ್ಜರಿ  ತನಿಖೆ ವೇಳೆ ಮನೆ ಕೆಲಸದಾಕೆ ಶಾಂತಳಿಂದಲೇ ಚಿನ್ನಾಭರಣ ಕಳವಾಗಿರುದು ಪತ್ತೆಯಾಗಿದೆ. ಪ್ರಕರಣ ಭೇದಿಸಿ ಶಾಂತ ರನ್ನು ಬಂಧಿಸಿ10 ಲಕ್ಷ ಮೌಲ್ಯದ ಚಿನ್ನಾಭರಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಊಸರವಳ್ಳಿ ಪಕ್ಷ – ಸಿಎಂ ಸಿದ್ದುಗೆ ಟ್ವೀಟ್​ನಲ್ಲೇ ತಿರುಗೇಟು ನೀಡಿದ ಜೆಡಿಎಸ್..!

Leave a Comment

DG Ad

RELATED LATEST NEWS

Top Headlines

ರಮೇಶ್ ರೆಡ್ಡಿ ನಿರ್ಮಾಣದ “ಘುಸ್ಪೈಥಿಯಾ” ಚಿತ್ರ ಆ.9ರಂದು ತೆರೆಗೆ..!

ನಿರ್ಮಾಪಕ ರಮೇಶ್ ರೆಡ್ಡಿ ಅವರು ಕನ್ನಡ ಚಿತ್ರರಂಗದಲ್ಲಿ ‘ಉಪ್ಪು ಹುಳಿ ಖಾರ’, ‘ನಾತಿಚರಾಮಿ’, ‘ಪಡ್ಡೆಹುಲಿ’, ‘100’, ‘ಗಾಳಿಪಟ 2’ ಚಿತ್ರಗಳನ್ನು ನಿರ್ಮಿಸಿದ್ದಾರೆ. ಪ್ರಸ್ತುತ ಬಹು ನಿರೀಕ್ಷಿತ “45”

Live Cricket

Add Your Heading Text Here