ಬೆಳಗಾವಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ದುಷ್ಕರ್ಮಿಗಳು ರಾಷ್ಟ್ರಪಕ್ಷಿ ನವಿಲುಗಳಿಗೆ ವಿಷದ ಕಾಳು ಹಾಕಿ ಕೊಂದಿದ್ದಾರೆ.
9 ನವಿಲುಗಳಿಗೆ ವಿಷದ ಕಾಳುಗಳನ್ನು ಹಾಕಿ ಮಾಂಸಕ್ಕಾಗಿ ಕೊಲ್ಲಲಾಗಿದೆ. ಗ್ರಾಮಸ್ಥರ ಇದನ್ನು ಗಮನಿಸಿ ಹಿಡಿಯಲು ಹೋದಾಗ ಕೃಷ್ಣಾ ನದಿಗೆ ಹಾರಿ ಖದೀಮರು ಪರಾರಿಯಾಗಿದ್ದಾರೆ.
ಕೃಷ್ಣಾ ನದಿ ದಡದ ಆಚೆಗೆ ಬೈಕ್ ನಿಲ್ಲಿಸಿ ನವಿಲುಗಳನ್ನು ಕೊಲ್ಲಲು ಇವ್ರೆಲ್ಲಾ ಬಂದಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಂಜರಿ ಗ್ರಾಮಸ್ಥರು ಮಾಹಿತಿ ನೀಡಿದ್ದು, ನವಿಲುಗಳ ಮರಣೋತ್ತರ ಪರೀಕ್ಷೆ ನಡೆಸಲಾಗ್ತಿದೆ.
ಇದನ್ನೂ ಓದಿ : ಜೈಲಲ್ಲಿ ಕುಳಿತು ಆತ್ಮಾಹುತಿ ದಾಳಿಗೆ ಸಂಚು ಪ್ರಕರಣ : 8 ಮಂದಿ ಶಂಕಿತ ಉಗ್ರರ ಮೇಲೆ NIA ಚಾರ್ಜ್ ಶೀಟ್..!
Post Views: 920