ನಟಿ ಕಂಗನಾ ರಣಾವತ್ ಅವರು ಭರ್ಜರಿ ಸುದ್ದಿಯಲ್ಲಿದ್ದಾರೆ. ಅವರು ಆಗಾಗ ಹೇಳಿಕೆ ನೀಡಿ ಸುದ್ದಿ ಆಗುತ್ತಾರೆ. ಈಗ ಅವರು ಕೇವಲ ನಟಿ ಅಲ್ಲ, ರಾಜಕಾರಣಿ ಕೂಡ ಹೌದು. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಪರ ಸ್ಪರ್ಧಿಸಿ, ಸಂಸದೆ ಆಗಿದ್ದಾರೆ.
ಇತ್ತೀಚೆಗೆ ಆರಂಭವಾದ ಭಾರತ ಮತ್ತು ಪಾಕ್ ನಡುವಿನ ಯುದ್ಧ ಭೀತಿ ಬಗ್ಗೆ ಕಂಗನಾ ರಣಾವತ್ ಇದೀಗ ಮಾತನಾಡಿದ್ದಾರೆ. ಪಾಕಿಸ್ತಾನವನ್ನು ‘ಭಯೋತ್ಪಾದಕರ ನಾಡು’ ಎಂದು ಕರೆದಿರುವ ಅವರು, ‘ವಿಶ್ವದ ಮ್ಯಾಪ್ನಿಂದಲೇ ಪಾಕಿಸ್ತಾನವನ್ನು ಅಳಿಸಿ ಹಾಕಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಏಪ್ರಿಲ್ 22ರಂದು ಮುಗ್ಧ ಪ್ರವಾಸಿಗರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಶ್ನಿಸಲಾಗಿದೆ ಎಂಬ WION ಸುದ್ದಿ ವರದಿಯನ್ನು ಕಂಗನಾ ರಣಾವತ್ ಅವರು ತಮ್ಮ ಅಧಿಕೃತ ಸಮಾಜಿಕ ಜಾಲತಾಣ ಖಾತೆಯಲ್ಲಿ ರೀ ಶೇರ್ ಮಾಡಿದ್ದಾರೆ. ಜಿರಳೆಗಳು… ಭಯಾನಕ, ಭಯಾನಕ ರಾಷ್ಟ್ರ ಭಯೋತ್ಪಾದಕರಿಂದ ತುಂಬಿದ್ದು.. ವಿಶ್ವ ಭೂಪಟದಿಂದಲೇ ಪಾಕಿಸ್ತಾನವನ್ನು ಅಳಿಸಿ ಹಾಕಬೇಕು’ ಎಂದು ನಟಿ ಬರೆದುಕೊಂಡಿದ್ದಾರೆ.


Author: Btv Kannada
Post Views: 146