ಇಂಡಸ್ ಬ್ಯಾಂಕ್​​​ ಸಿಬ್ಬಂದಿ ಕಿರುಕುಳ ಆರೋಪ – ಸಾಲ ಪಡೆದಿದ್ದ ವ್ಯಕ್ತಿ ಆತ್ಮಹತ್ಯೆ!

ಬೆಂಗಳೂರು : ಇಂಡಸ್​ ಬ್ಯಾಂಕ್​​​ ಸಿಬ್ಬಂದಿ ಕಿರುಕುಳಕ್ಕೆ ವ್ಯಕ್ತಿಯೋರ್ವ ಸೂಸೈಡ್​​ ಮಾಡಿಕೊಂಡ ಘಟನೆ ಬಾಗಲಕೋಟೆಯ ನವನಗರದ 2ನೇ ಸೆಕ್ಟರ್​​​​ನಲ್ಲಿ ನಡೆದಿದೆ. 41 ವರ್ಷದ ದಾದಾ ಹಯಾತ್​​ ಕೊರ್ತಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಬಾಗಲಕೋಟೆಯ ನವನಗರದ 2ನೇ ಸೆಕ್ಟರ್​​​​ನ ಮನೆಯಲ್ಲಿ ದಾದಾ ಹಯಾತ್​​ ಕೊರ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ವ್ಯಕ್ತಿ ಬಾಯಿ ಕಾನ್ಸರ್​​ನಿಂದ ಬಳಲುತ್ತಿದ್ದರು. ಹೀಗಾಗಿ ಕಾನ್ಸರ್​​​​ ಚಿಕಿತ್ಸೆಗೆಂದು ಇಂಡಸ್ ಲ್ಯಾಂಡ್​​​ ಮಹಿಳಾ ಸಂಘದಿಂದ ಸಾಲ ಪಡೆದಿದ್ದರು.

ಸಾಲ ಮರುಪಾವತಿಗಾಗಿ ಇಂಡಸ್​ ಬ್ಯಾಂಕ್​​​ ಸಿಬ್ಬಂದಿಯಿಂದ ಪದೇ ಪದೇ ಕಿರುಕುಳದ ಆರೋಪ ಕೇಳಿಬಂದಿದೆ. ಇನ್ನು ನಿನ್ನೆಯೂ ಬ್ಯಾಂಕ್ ಸಿಬ್ಬಂದಿ ಲೋನ್​ ರಿಕವರಿಗಾಗಿ ಬಂದು ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದರು ಎನ್ನಲಾಗಿದೆ. ಕಿರುಕುಳ ತಾಳಲಾರದೇ ನೇಣಿಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರ ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ : ‘ಬಿಗ್​ಬಾಸ್ ಕನ್ನಡ’ ಕೇವಲ ರಿಯಾಲಿಟಿ ಶೋ ಅಲ್ಲ, ಸಾಂಸ್ಕೃತಿಕ ಶಕ್ತಿ ಕೇಂದ್ರ : ಜಿಯೋಸ್ಟಾರ್ ಸೌತ್ ಕ್ಲಸ್ಟರ್ ಮುಖ್ಯಸ್ಥ ಕೃಷ್ಣನ್ ಕುಟ್ಟಿ!

Btv Kannada
Author: Btv Kannada

Read More