60 ಕೋಟಿ ವಂಚನೆ ಆರೋಪದ ಬೆನ್ನಲ್ಲೇ ರೆಸ್ಟೋರೆಂಟ್​ಗೆ ಬೀಗ ಹಾಕಿದ ಶಿಲ್ಪಾ ಶೆಟ್ಟಿ!

ಮುಂಬೈ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ವಿರುದ್ಧ 60.4 ಕೋಟಿ ರೂ. ವಂಚನೆ ಪ್ರಕರಣ ದಾಖಲಾಗಿದ್ದು, ಈ ಬೆನ್ನಲ್ಲೇ ಶಿಲ್ಪಾ ಶೆಟ್ಟಿ ಮುಂಬೈನ ಫೇಮಸ್ ‘ಬಾಸ್ಟಿಯನ್ ಬಾಂದ್ರಾ’ ರೆಸ್ಟೋರೆಂಟ್ ಮುಚ್ಚುವುದಾಗಿ ಘೋಷಿಸಿದ್ದಾರೆ.

ಈ ಬಗ್ಗೆ ಶಿಲ್ಪಾ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಗುರುವಾರ ಮುಂಬೈನ ಐಕಾನಿಕ್ ಸ್ಥಳವಾದ ‘ಬಾಸ್ಟಿಯನ್ ಬಾಂದ್ರಾ’ ರೆಸ್ಟೋರೆಂಟ್​ನ ಯುಗ ಅಂತ್ಯವಾಗುತ್ತಿದೆ. ಈ ಜಾಗ ಹಲವು ನೆನಪುಗಳಿಗೆ, ಮರೆಯಲಾಗದ ರಾತ್ರಿಗಳಿಗೆ ಸಾಕ್ಷಿಯಾಗಿದೆ. ಹೀಗಾಗಿ ನಮ್ಮ ನಿಕಟವರ್ತಿಗಳಿಗೆ ಅದ್ಭುತ ಸಂಜೆಯನ್ನು ಆಯೋಜಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ.

2016 ರಿಂದ ಸೀಫುಡ್‌ಗೆ ಹೆಸರಾದ ಬಾಸ್ಟಿಯನ್ ಬಾಂದ್ರಾವನ್ನು ಶಿಲ್ಪಾ ಶೆಟ್ಟಿ ಮತ್ತು ರೆಸ್ಟೋರೇಟರ್ ರಂಜಿತ್ ಬಿಂದ್ರಾ ಸಹ-ಮಾಲೀಕತ್ವದಲ್ಲಿ ನಡೆಸುತ್ತಿದ್ದರು.

ಬೆಸ್ಟ್ ಡೀಲ್ ಟಿವಿ ಕಂಪನಿಗೆ ಸಂಬಂಧಿಸಿದಂತೆ ಮುಂಬೈ ಮೂಲದ ಉದ್ಯಮಿ ದೀಪಕ್ ಕೊಠಾರಿ, ಜುಹು ಪೊಲೀಸ್ ಠಾಣೆಯಲ್ಲಿ ಶಿಲ್ಪಾ ಶೆಟ್ಟಿ ಕುಂದ್ರಾ ಮತ್ತು ರಾಜ್ ಕುಂದ್ರಾ ವಿರುದ್ದ 60 ಕೋಟಿ ರೂ. ಸಾಲ ವಂಚನೆ ಪ್ರಕರಣ ದಾಖಲಿಸಿದ್ದರು. ಆದರೆ ಈ ಆರೋಪವನ್ನು ದಂಪತಿ ಅಲ್ಲಗೆಳೆದಿದ್ದಾರೆ. ಜೊತೆಗೆ ಬಹಳ ಹಿಂದೆ ನಡೆದ ವ್ಯವಹಾರವಿದು. ಕಂಪನಿಯು ಆರ್ಥಿಕ ಸಂಕಷ್ಟ ಎದುರಿಸಿತ್ತು ಮತ್ತು ದೀರ್ಘಕಾಲದ ಕಾನೂನು ಸಂಘರ್ಷ ಎದುರಿಸುತ್ತಿತ್ತು ಎಂದು ಶಿಲ್ಪಾ ಶೆಟ್ಟಿ ಪರ ವಕೀಲ ಪ್ರಶಾಂತ್ ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ : ಟಿ.ಎನ್. ನಾಗೇಶ್ ನಿರ್ದೇಶನದ “ಕುಂಭ‌ ಸಂಭವ” ಚಿತ್ರದ ಟೀಸರ್ ಬಿಡುಗಡೆ!

Btv Kannada
Author: Btv Kannada

Read More