ಚಿಕ್ಕಮಗಳೂರು : ಮಾಜಿ ಐ.ಪಿ.ಎಸ್ ಅಣ್ಣಾಮಲೈ ಮುಂದೆ ತಮಿಳುನಾಡು ಮುಖ್ಯಮಂತ್ರಿ ಆಗುತ್ತಾರೆ ಎಂದು ಅವಧೂತ ವಿನಯ್ ಗುರೂಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದ ಮಾಜಿ ಐ.ಪಿ.ಎಸ್ ಕೆ. ಅಣ್ಣಾಮಲೈ ಮುಂದೊಂದು ದಿನ ತಮಿಳುನಾಡಿನ ಮುಖ್ಯಮಂತ್ರಿ ಆಗುತ್ತಾರೆ ಎಂದು ಈ ಮೊದಲೇ ಹೇಳಿದ್ದಾಗಿ ಗೌರಿಗದ್ದೆ ಅವಧೂತ ವಿನಯ್ ಗುರೂಜಿ ತಿಳಿಸಿದರು.
ಕಡೂರಿನ ಯಗಟಿಯಲ್ಲಿ ನಡೆದ ಕುಮಾರವ್ಯಾಸ ಜಯಂತಿ ವೇಳೆ ಆಶೀರ್ವಚನ ನೀಡುವ ವೇಳೆ ಈ ಬಗ್ಗೆ ಪ್ರಸ್ತಾಪಿಸಿದ ವಿನಯ್ ಗುರೂಜಿ ಅಣ್ಣಾಮಲೈ ಚಿಕ್ಕಮಗಳೂರಲ್ಲಿ ಭೇಟಿ ಆಗಿದ್ದಾಗಲೇ ನೀವು ಮುಂದೆ ಒಂದು ದಿನ ತಮಿಳುನಾಡು ಮುಖ್ಯಮಂತ್ರಿ ಆಗುತ್ತೀರಾ ಎಂದು ಹೇಳಿದ್ದಾಗಿ ತಿಳಿಸಿದ ಅವರು ಇಷ್ಟು ದಿನ ಖಾಕಿ ಕೆಲಸ ಮುಗಿಯಿತು ಇನ್ನು ಮುಂದೆ ಖಾವಿ ಕೆಲಸ ಮಾಡಿ, ಅಲ್ಲದೇ ನಿಮ್ಮಿಂದ ತಮಿಳುನಾಡಿನಲ್ಲಿ ಧರ್ಮ ಬೆಳೆಯುತ್ತದೆ ನೀವು ಅರುಣಾಚಲಂ, ತಿರುವಣ್ಣಾಮಲೈ ದೇವಾಲಯಕ್ಕೆ ಸದಾ ಭೇಟಿ ಕೊಡುತ್ತಿರಿ ಎಂದು ಅಣ್ಣಾಮಲೈ ಅವರಿಗೆ ಹೇಳಿದ್ದಾಗಿ ವಿನಯ್ ಗುರೂಜಿ ಸ್ಮರಿಸಿದರು.
ಚಿಕ್ಕಮಗಳೂರಿನಲ್ಲಿ ಭೇಟಿ ಮಾಡಿದ್ದಾಗಲೇ ಎರಡು ಸೇಬಿನ ಹಣ್ಣುಗಳನ್ನು ಕೊಟ್ಟು ಆಶೀರ್ವದಿಸಿ ಮುಂದೆ ಸಿ.ಎಂ ಆಗುತ್ತೀರ ಎಂದು ಕೆಲವು ವರ್ಷಗಳ ಹಿಂದೆ ಹೇಳಿದ್ದೆವು ಎಂದು ವಿನಯ್ ಗುರೂಜಿ ತಿಳಿಸಿದರು.
ಇದನ್ನೂ ಓದಿ : ಕಾರ್ತಿಕ್ ಮಹೇಶ್ ಮುಡಿಗೇರಿದ ಬಿಗ್ ಬಾಸ್ ಕನ್ನಡ ಸೀಸನ್ 10ರ ಕಿರೀಟ – ಸಿಕ್ಕ ಮೊತ್ತವೆಷ್ಟು?