Download Our App

Follow us

Home » ಅಪರಾಧ » ಮರ್ಡರ್ ಕೇಸ್​​ನಲ್ಲಿ ನಟ ದರ್ಶನ್ ಅರೆಸ್ಟ್..!

ಮರ್ಡರ್ ಕೇಸ್​​ನಲ್ಲಿ ನಟ ದರ್ಶನ್ ಅರೆಸ್ಟ್..!

ಮರ್ಡರ್​​ ಕೇಸ್​ ಸಂಬಂಧ ನಟ ದರ್ಶನ್ ಅವರನ್ನು​​ ಅರೆಸ್ಟ್​ ಮಾಡಲಾಗಿದೆ. ಇಂದು ಬೆಳಗ್ಗೆ ಆರ್​​​.ಆರ್​​​.ನಗರ ಮನೆಯಿಂದ ದರ್ಶನ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಅರೆಸ್ಟ್​ ಮಾಡಿದ್ದು, DCP ಗಿರೀಶ್​ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಆರ್​​.ಆರ್​​​.ನಗರ ನಿವಾಸದಲ್ಲಿ ನಟ ದರ್ಶನ್​ ಅರೆಸ್ಟ್​ ಮಾಡಲಾಗಿದೆ.

ದರ್ಶನ್ ರೇಣುಕಾಸ್ವಾಮಿ ಎಂಬವರ ಕೆನ್ನೆಗೆ ಭಾರಿಸಿದ್ದರು, ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದು ರೇಣುಕಾಸ್ವಾಮಿ ಸಾವನ್ನಪ್ಪಿದ್ದರು. ಮರ್ಡರ್​​ ಕೇಸ್​ನಲ್ಲಿ ಅರೆಸ್ಟ್ ಮಾಡಿರುವ ದರ್ಶನ್​​ ಅವರನ್ನು ಕೆಲ ಹೊತ್ತಿನಲ್ಲೇ ಮೆಡಿಕಲ್​ ಟೆಸ್ಟ್​ಗೆ ಕರೆದೊಯ್ಯಲಾಗುತ್ತದೆ.

ಎರಡು ತಿಂಗಳ ಹಿಂದೆ ಪವಿತ್ರಾಗೌಡ ಕುಟುಂಬಕ್ಕೆ ಸೇರಿದ ರೇಣುಕಾಸ್ವಾಮಿ ಹತ್ಯೆ ನಡೆದಿತ್ತು, ಕೊಲೆ ಆರೋಪಿಗಳ ಜೊತೆ ದರ್ಶನ್​​ ಸಂಪರ್ಕ ಹಿನ್ನೆಲೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಕೊಲೆ ಆರೋಪಿಗಳ ಜೊತೆ ದರ್ಶನ್​ ಅವರಿಗೆ ಸಂಪರ್ಕ ಇದ್ದ ಮಾಹಿತಿ ಲಭ್ಯವಾಗಿದೆ. ಹತ್ಯೆ ಸಂಬಂಧ ರೇಣುಕಾಸ್ವಾಮಿ ಸಂಬಂಧಿಕರು ದೂರು ನೀಡಿದ್ದರು. ಕೊಲೆ ಆರೋಪಿಗಳ ಹೇಳಿಕೆ ಆಧರಿಸಿ ನಟ ದರ್ಶನ್​​ನ್ನು​ ಅರೆಸ್ಟ್ ಮಾಡಲಾಗಿದೆ.

ಇದನ್ನೂ ಓದಿ : ಶ್ರೀದೇವಿಗೆ ಇಲ್ಲೀಗಲ್​ ರಿಲೇಷನ್​ಶಿಪ್ ಇದೆ : ಗಂಭೀರ ಆರೋಪ ಮಾಡಿದ ಯುವ ರಾಜ್​​ಕುಮಾರ್..!

 

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here