ಮರ್ಡರ್ ಕೇಸ್ ಸಂಬಂಧ ನಟ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಇಂದು ಬೆಳಗ್ಗೆ ಆರ್.ಆರ್.ನಗರ ಮನೆಯಿಂದ ದರ್ಶನ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದು, DCP ಗಿರೀಶ್ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಆರ್.ಆರ್.ನಗರ ನಿವಾಸದಲ್ಲಿ ನಟ ದರ್ಶನ್ ಅರೆಸ್ಟ್ ಮಾಡಲಾಗಿದೆ.
ದರ್ಶನ್ ರೇಣುಕಾಸ್ವಾಮಿ ಎಂಬವರ ಕೆನ್ನೆಗೆ ಭಾರಿಸಿದ್ದರು, ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದು ರೇಣುಕಾಸ್ವಾಮಿ ಸಾವನ್ನಪ್ಪಿದ್ದರು. ಮರ್ಡರ್ ಕೇಸ್ನಲ್ಲಿ ಅರೆಸ್ಟ್ ಮಾಡಿರುವ ದರ್ಶನ್ ಅವರನ್ನು ಕೆಲ ಹೊತ್ತಿನಲ್ಲೇ ಮೆಡಿಕಲ್ ಟೆಸ್ಟ್ಗೆ ಕರೆದೊಯ್ಯಲಾಗುತ್ತದೆ.
ಎರಡು ತಿಂಗಳ ಹಿಂದೆ ಪವಿತ್ರಾಗೌಡ ಕುಟುಂಬಕ್ಕೆ ಸೇರಿದ ರೇಣುಕಾಸ್ವಾಮಿ ಹತ್ಯೆ ನಡೆದಿತ್ತು, ಕೊಲೆ ಆರೋಪಿಗಳ ಜೊತೆ ದರ್ಶನ್ ಸಂಪರ್ಕ ಹಿನ್ನೆಲೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೊಲೆ ಆರೋಪಿಗಳ ಜೊತೆ ದರ್ಶನ್ ಅವರಿಗೆ ಸಂಪರ್ಕ ಇದ್ದ ಮಾಹಿತಿ ಲಭ್ಯವಾಗಿದೆ. ಹತ್ಯೆ ಸಂಬಂಧ ರೇಣುಕಾಸ್ವಾಮಿ ಸಂಬಂಧಿಕರು ದೂರು ನೀಡಿದ್ದರು. ಕೊಲೆ ಆರೋಪಿಗಳ ಹೇಳಿಕೆ ಆಧರಿಸಿ ನಟ ದರ್ಶನ್ನ್ನು ಅರೆಸ್ಟ್ ಮಾಡಲಾಗಿದೆ.
ಇದನ್ನೂ ಓದಿ : ಶ್ರೀದೇವಿಗೆ ಇಲ್ಲೀಗಲ್ ರಿಲೇಷನ್ಶಿಪ್ ಇದೆ : ಗಂಭೀರ ಆರೋಪ ಮಾಡಿದ ಯುವ ರಾಜ್ಕುಮಾರ್..!