ಚಾಮರಾಜನಗರ : ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಅಶ್ವಿನ್ ಕುಮಾರ್ ಹೆಸರು ಮುನ್ನೆಲೆಗೆ ಬಂದಿದೆ. ಹಾಲಿ ಸಂಸದ ಶ್ರೀನಿವಾಸ ಪ್ರಸಾದ್ ಸ್ಪರ್ಧೆಗೆ ಮತ್ತೆ ನಿರಾಕರಿಸಿದ್ದಾರೆ. ಪರ್ಯಾಯ ಅಭ್ಯರ್ಥಿ ಹುಡುಕಾಟಕ್ಕೆ ಜೆಡಿಎಸ್-ಬಿಜೆಪಿ ಮುಂದಾಗಿದ್ದು, ಹೊಸ ಅಭ್ಯರ್ಥಿಗಾಗಿ ಎರಡೂ ಪಕ್ಷಗಳಿಂದ ಶೋಧ ನಡೆಯುತ್ತಿದೆ.
ತಿ. ನರಸೀಪುರ ಕ್ದೇತ್ರದ ಮಾಜಿ ಶಾಸಕ ಅಶ್ವಿನ್ ಕುಮಾರ್ ಸ್ಪರ್ಧಿಸುವ ಸಾಧ್ಯತೆಯಿದೆ. ಮೈತ್ರಿ ಅಭ್ಯರ್ಥಿಯಾಗಿ ಕಣಕ್ಳಿಳಿಸಲು ಉಭಯ ಪಕ್ಷಗಳು ಪ್ರಯತ್ನಿಸುತ್ತಿದೆ. ಅಶ್ವಿನ್ ಕುಮಾರ್ ಸರಳ, ಸಂಭಾವಿತ ರಾಜಕಾರಣಿಯಾಗಿದ್ದು, ತಿ. ನರಸೀಪುರ, ಹನೂರು ಎಚ್.ಡಿ. ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯವಿದೆ.
ಹನೂರು ಕ್ಷೇತ್ರದಲ್ಲಿ ಜೆಡಿಎಸ್ ಎಂಎಲ್ಎ ಆಯ್ಕೆಯಾಗಿದ್ದು, ಅಶ್ವಿನ್ ಕುಮಾರ್ ಕಣಕ್ಕಿಳಿಸಿದರೆ ಕಾಂಗ್ರೆಸ್ ಪ್ಲಾನ್ ವಿಫಲಗೊಳಿಸಬಹುದೆಂಬ ಲೆಕ್ಕಾಚಾರ ನಡೆದಿದೆ. ಎರಡೂ ಪಕ್ಷಗಳಲ್ಲಿ ಅಶ್ವಿನ್ ಕುಮಾರ್ ಹೆಸರಿಗೆ ಸಹಮತವಿದೆ.
ಇದನ್ನೂ ಓದಿ : ಬೆಂಗಳೂರು : ಕಂತೆ ಕಂತೆ ಹಣದ ವೀಡಿಯೋ ತೋರಿಸಿ ಬಿಲ್ಡಪ್ ಕೊಟ್ಟು ವಂಚಿಸುತ್ತಿದ್ದ ವಂಚಕ ಅರೆಸ್ಟ್..!