Download Our App

Follow us

Home » ಅಪರಾಧ » ಜೈಲಿನಲ್ಲಿದ್ದ ನಟ ದರ್ಶನ್​​ಗೆ ವಿಡಿಯೋ ಕಾಲ್ – ಮಾಜಿ ರೌಡಿಶೀಟರ್ ಪುತ್ರ ಪೊಲೀಸ್ ವಶಕ್ಕೆ..!

ಜೈಲಿನಲ್ಲಿದ್ದ ನಟ ದರ್ಶನ್​​ಗೆ ವಿಡಿಯೋ ಕಾಲ್ – ಮಾಜಿ ರೌಡಿಶೀಟರ್ ಪುತ್ರ ಪೊಲೀಸ್ ವಶಕ್ಕೆ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ನಟ ದರ್ಶನ್​​ ರೌಡಿಶೀಟರ್‌ ಜೊತೆ ಸೇರಿ ವಿಡಿಯೋ ಕಾಲ್‌ನಲ್ಲಿ ಮಾತನಾಡಿರೋ ವಿಡಿಯೋ ವೈರಲ್ ಆಗಿತ್ತು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ರೌಡಿಶೀಟರ್​​ ಮಗ ಸತ್ಯನನ್ನು ಪೊಲೀಸ್​ ವಶಕ್ಕೆ ಪಡೆದಿದ್ದಾರೆ.

ಜೈಲಿಂದಲೇ ವಿಡಿಯೋ ಕಾಲ್‌ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಜೈಲಿನಲ್ಲಿರುವ ಮಾರ್ಕೆಟ್ ಧರ್ಮ, ಮಾಜಿ ರೌಡಿಶೀಟರ್ ಜಾನಿ ಅಲಿಯಾಸ್ ಜನಾರ್ದನ್ ಮಗ ಸತ್ಯನಿಗೆ ವಿಡಿಯೋ ಕಾಲ್​​ ಮಾಡಿದ್ದಾನೆ. ಈ ವೇಳೆ ಸತ್ಯನ ಜೊತೆ ಮಾತಾಡಲು ದರ್ಶನ್‌ಗೆ ಧರ್ಮ ಫೋನ್​ ನೀಡಿದ್ದಾನೆ. ಅದರಲ್ಲಿ ಸತ್ಯನೊಂದಿಗೆ ಕೊಲೆ ಆರೋಪಿ ದರ್ಶನ್ ಮಾತನಾಡಿದ್ದಾರೆ. ಈ ವಿಡಿಯೋ ಎಲ್ಲಡೆ ಬಾರಿ ವೈರಲ್​​ ಆಗಿತ್ತು.

ಇದೀಗ ದರ್ಶನ್​ ಜೊತೆ ವಿಡಿಯೋ ಕಾಲ್​ನಲ್ಲಿ ಮಾತನಾಡಿದ್ದ ಮಾಜಿ ರೌಡಿಶೀಟರ್ ಜಾನಿ ಅಲಿಯಾಸ್ ಜನಾರ್ದನ್ ಮಗ ಸತ್ಯನನ್ನು ಬ್ಯಾಡರಹಳ್ಳಿ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : KWPL ಸೀಸನ್‌ 3ರ ಟ್ರೋಫಿ ಅನಾವರಣಗೊಳಿಸಿದ ಶಾಸಕ ಅಶ್ವಥ್ ನಾರಾಯಣ..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here